Advertisement

ಪ್ರಕಾಶ್‌ ರೈಗೆ ಕಾವೇರಿಗಿಂತ ಕಾಸೇ ಮುಖ್ಯ: ಪ್ರತಾಪ್‌ ಸಿಂಹ

06:55 AM Jun 05, 2018 | Team Udayavani |

ಮೈಸೂರು: ನಟ ಪ್ರಕಾಶ್‌ ರೈಗೆ ಕಾವೇರಿಗಿಂತ ಕಾಸು ಮುಖ್ಯವಾಗಿದ್ದು, ಆ ಮೂಲಕ ಕಾವೇರಿ ವಿಷಯದಲ್ಲಿ ಕರ್ನಾಟಕದ ಪಾಲಿಗೆ  ಖಳನಾಯಕನಾಗಿದ್ದಾರೆ ಎಂದು ಸಂಸದ ಪ್ರತಾಪ್‌ಸಿಂಹ ಟೀಕಿಸಿದ್ದಾರೆ.

Advertisement

“ಕಾಲಾ’ ಚಿತ್ರ ಬಿಡುಗಡೆ ವಿಚಾರದಲ್ಲಿ ನಟ ಪ್ರಕಾಶ್‌ ರೈ ಟ್ವಿಟ್‌ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮಗೆಲ್ಲ ಕಾಸಿಗಿಂತ ಕಾವೇರಿಯೇ ಮುಖ್ಯವಾಗಿದ್ದು, ಪ್ರಕಾಶ್‌ ರೈಗೆ ಕಾವೇರಿಗಿಂತ ಕಾಸೇ ಮುಖ್ಯವಾಗಿದೆ. ಈ ಹಿಂದೆ ಖಾಸಗಿ ಟಿವಿ ಸಿನಿಮಾ ಕಾರ್ಯಕ್ರಮದಲ್ಲಿ ಕಾವೇರಿ ವಿಷಯದ ಬಗ್ಗೆ ಚರ್ಚೆ ಮಾಡುವುದಿಲ್ಲ ಎಂದಿದ್ದರು. ಆದರೆ ಇದೀಗ ಸಿನಿಮಾಗೂ ಕಾವೇರಿಗೂ ಏನು ಸಂಬಂಧ ಎನ್ನುತ್ತಿದ್ದಾರೆ. ಇಂತಹ ಹೇಳಿಕೆ ನೀಡುವ ಮೂಲಕ ಕರ್ನಾಟಕ ಹಾಗೂ ಕಾವೇರಿಯನ್ನು ಪದೇಪದೆ ಕೆಣಕುತ್ತಿದ್ದಾರೆ ಎಂದು ಕಿಡಿಕಾರಿದರು. ಪ್ರಕಾಶ್‌ ರೈಗೆ ಕಾವೇರಿ ವಿಷಯದಲ್ಲಿ ಭಾವನಾತ್ಮಕ ಸಂಬಂಧ ಇಲ್ಲದಿರಬಹುದು. ಆದರೆ, ನಮಗೆ ಕಾವೇರಿ ವಿಷಯದಲ್ಲಿ ಭಾವನಾತ್ಮಕ ಸಂಬಂಧವಿದೆ. ಹೀಗಾಗಿ ಪ್ರಕಾಶ್‌ ರೈ ಟ್ವಿಟ್‌ ಅನ್ನು  ಖಂಡಿಸುತ್ತೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next