Advertisement

ಶಾಲಾ ಮಕ್ಕಳ ಪ್ರಾಣ ಉಳಿಸಿದ ಶಿಕ್ಷಕಿಗೆ ಪ್ರಶಂಸೆ

08:15 AM Feb 18, 2018 | Team Udayavani |

ನ್ಯೂಯಾರ್ಕ್‌: ಫ್ಲೋರಿಡಾದ ಸ್ಟೋನ್‌ಮನ್‌ ಡಗ್ಲಾಸ್‌ ಶಾಲೆಯಲ್ಲಿ ನಡೆದ ಶೂಟೌಟ್‌ ಪ್ರಕರಣದ ವೇಳೆ ತಮ್ಮ ವಿದ್ಯಾರ್ಥಿಗಳನ್ನು ರಕ್ಷಿಸಿದ ಭಾರತೀಯ ಮೂಲದ ಶಿಕ್ಷಕಿಯ ಧೈರ್ಯ ಈಗ ಪ್ರಶಂಸೆಗೆ ಪಾತ್ರವಾಗಿದೆ. 

Advertisement

ಈ ಶೌರ್ಯ ಮೆರೆದ ಶಿಕ್ಷಕಿ ಶಾಂತಿ ವಿಶ್ವನಾಥನ್‌. ಇವರು ಗಣಿತದ ಶಿಕ್ಷಕಿ. ಗುಂಡಿನ ದಾಳಿ ವೇಳೆ ಅವರು ತರಗತಿಯಲ್ಲಿ ಬೀಜಗಣಿತದ ಪಾಠ ಮಾಡುತ್ತಿದ್ದರು. ಅಪಾಯದ ಸೈರನ್‌ ಮೊಳಗಿದ ಕೂಡಲೇ ಎಚ್ಚೆತ್ತ ಅವರು ವಿದ್ಯಾರ್ಥಿಗಳಿಗೆ ನೆಲಕ್ಕೆ ಆತುಕೊಳ್ಳುವಂತೆ ಸೂಚಿಸಿ, ತರಗತಿಯ ಎಲ್ಲ ಕಿಟಕಿ ಬಾಗಿಲುಗಳನ್ನು ಮುಚ್ಚಿದರು. ಈ ಮೂಲಕ ತರಗತಿಯಲ್ಲಿದ್ದ ಮಕ್ಕಳು ಬಂದೂಕುಧಾರಿ ನಿಕೋಲಸ್‌ ಕ್ರೂಸ್‌ ಕಣ್ಣಿಗೆ ಬೀಳದಂತೆ ನೋಡಿಕೊಂಡರು ಎಂದು ಅಮೆರಿಕದ ಪತ್ರಿಕೆಯೊಂದು ವರದಿ ಮಾಡಿದೆ.

ಶಾಂತಿ ಕೂಡಲೇ ತಮ್ಮ ಬುದ್ಧಿ ಉಪಯೋಗಿಸಿದ ಕಾರಣ ಹಲವು ಮಕ್ಕಳ ಜೀವ ಉಳಿದಿದೆ ಎಂದು ವಿದ್ಯಾರ್ಥಿಯೊಬ್ಬರ ತಾಯಿ ಹೇಳಿದ್ದಾರೆ. ಸ್ಪೆಷಲ್‌ ವೆಪನ್‌ ಆ್ಯಂಡ್‌ ಟ್ಯಾಕ್ಟಿಕ್ಸ್‌ ತಂಡ ಕೊಠಡಿಯ ಬಾಗಿಲು ಬಡಿದಾಗಲೂ ಬಾಗಿಲು ತೆರೆದಿರಲಿಲ್ಲ. 

Advertisement

Udayavani is now on Telegram. Click here to join our channel and stay updated with the latest news.

Next