Advertisement

ಪಂ|ಪುಟ್ಟರಾಜರ 107ನೇ ಜಯಂತೋತ್ಸವ: ಭವ್ಯ ಮೆರವಣಿಗೆ

02:31 PM Mar 03, 2021 | Team Udayavani |

ಗದಗ: ಅಂಧರ ಬೆಳಕಿನ ಆಶಾಕಿರಣ, ಅನಾಥರಿಗೆ ದಾರಿ ದೀಪ ಗಾನಗಂಧರ್ವ ಲಿಂ|ಪಂ|ಪುಟ್ಟರಾಜ ಕವಿ ಗವಾಯಿಗಳ 107ನೇ ಜಯಂತೋತ್ಸವ ಅಂಗವಾಗಿ 1007 ಪೂರ್ಣ ಕುಂಭದೊಂದಿಗೆ ಪಂ|ಪುಟ್ಟರಾಜಕವಿ ಗವಾಯಿಗಳ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು.

Advertisement

ವೀರೇಶ್ವರ ಪುಣ್ಯಾಶ್ರಮದಿಂದ ಆರಂಭಗೊಂಡ ಬೃಹತ್ ಕುಂಭ ಮೇಳ ಮೆರವಣಿಗೆ ಭೂಮರೆಡ್ಡಿ ಸರ್ಕಲ್, ಕೆ.ಎಚ್.ಪಾಟೀಲ್ ಸರ್ಕಲ್, ಹತ್ತಿಕಾಳ ಕೂಟ, ಟಾಂಗಾಕೂಟ್, ಗಾಂಧಿ ಸರ್ಕಲ್, ಕೆ.ಸಿ.ರಾಣಿ ರಸ್ತೆ ಮಾರ್ಗವಾಗಿ ಪುನಃ ಪುಣ್ಯಾಶ್ರಮ ತಲುಪಿತು. ಸಾವಿರಾರು ಮಹಿಳೆಯರು ಹಾಗೂ ವಿದ್ಯಾರ್ಥಿಗಳು ಕುಂಭಗಳನ್ನು ಹೊತ್ತು ಕಳಸ ಕನ್ನಡಿ ಹಿಡಿದು ಸಾಗಿದರು.

ವೀರಗಾಸೆ, ಡೊಳ್ಳು ಕುಣಿತ ಹಾಗೂ ಜಗ್ಗಲಿಗಿ ಕಲಾ ಬಳಗ ಸೇರಿದಂತೆ ಮತ್ತಿತರೆ ಕಲಾ ತಂಡಗಳು ಮೆರವಣಿಗೆಗೆ ಮೆರಗು ನೀಡಿದವು.

Advertisement

Udayavani is now on Telegram. Click here to join our channel and stay updated with the latest news.

Next