Advertisement

ಆದಿತ್ಯ ಠಾಕ್ರೆ ಮಹಾ ಸಿಎಂ? ಹೌದೆನ್ನುತ್ತಿದೆ ಠಾಕ್ರೆ ನಿವಾಸದ ಎದುರಿರುವ ಬ್ಯಾನರ್

09:20 AM Nov 06, 2019 | keerthan |

ಮುಂಬೈ: ಮಹಾರಾಷ್ಟ್ರ ಮುಂದಿನ ಮುಖ್ಯಮಂತ್ರಿ ಯಾರಾಗಬಹುದು ಎನ್ನುವುದು ಇನ್ನೂ ತಣಿಯದ ಕುತೂಹಲ. ಹೀಗಿರುವಾಗಲೇ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಮನೆ ಮಾತೋಶ್ರೀ ಮುಂದೆ ಹಾಕಲಾಗಿರುವ ಬ್ಯಾನರ್ ಒಂದು ಆದಿತ್ಯ ಠಾಕ್ರೆಯೇ ಮುಂದಿನ ಸಿಎಂ ಎನ್ನುತ್ತಿದೆ.

Advertisement

ಶಿವ ಸೇನಾ ಕಾರ್ಪೋರೇಟರ್ ಹಾಜಿ ಹಲೀಂ ಖಾನ್ ಎನ್ನುವವರು ಮಾತೋಶ್ರೀ ಮನೆಯ ಹೊರಗೆ ಈ ಬ್ಯಾನರ್ ಅಳವಡಿಸಿದ್ದಾರೆ. ಅದರಲ್ಲಿ ನನ್ನ ಶಾಸಕ, ನನ್ನ ಮುಖ್ಯಮಂತ್ರಿ ಎಂಬ ಒಕ್ಕಣೆಯೊಂದಿಗೆ ಆದಿತ್ಯ ಠಾಕ್ರೆ ಫೋಟೋ ಬಳಸಲಾಗಿದೆ.

ಈ ಹಿಂದೆಯೂ ಇದೇ ರೀತಿಯ ಒಕ್ಕಣೆಯ ಬ್ಯಾನರ್ ಒಂದು ಠಾಕ್ರೆ ಮನೆ ಮುಂದೆ ಅಳವಡಿಸಲಾಗಿತ್ತು. ಆದರೆ ಅದನ್ನು ಮುಂಬೈ ನಗರ ಪಾಲಿಕೆಯವರು ತೆರವುಗೊಳಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next