Advertisement

ಹೂತ ಶವ ತೆಗೆದು ಡಿಎನ್‌ಎ ಪರೀಕ್ಷೆ

03:33 PM Mar 19, 2022 | Team Udayavani |

ದೇವದುರ್ಗ: ಪಟ್ಟಣದ ಬಸ್‌ ನಿಲ್ದಾಣ ಪಕ್ಕದ ರಾಜ ಕಾಲುವೆಯಲ್ಲಿ ಕಳೆದ ಏಪ್ರಿಲ್‌ ತಿಂಗಳಲ್ಲಿ ಅನುಮಾನಾಸ್ಪದ ಮೃತಪಟ್ಟ ವ್ಯಕ್ತಿಯೊಬ್ಬರ ಗುರುತು ಪತ್ತೆಯಾಗದ ಕಾರಣ ಸಾರ್ವಜನಿಕ ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಪುರಸಭೆ ಸಿಬ್ಬಂದಿ ಠಾಣೆ ಪಕ್ಕದಲ್ಲಿರುವ ಸ್ಮಶಾನದಲ್ಲಿ ಅಂತ್ಯಕ್ರಿಯೆ ಮಾಡಿದ್ದರು.

Advertisement

ಕಳೆದ ವಾರಗಳಿಂದ ಕೋತ್ತದೊಡ್ಡಿ ಗ್ರಾಮದ ವಿಠಲ್‌ ಎಂಬುವವರು ತಂದೆ ಕಾಣೆಯಾಗಿದ್ದಾರೆ ಎಂದು ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಅನುಮಾನಾಸ್ಪದ ಮೃತಪಟ್ಟ ವ್ಯಕ್ತಿಯ ಮೃತದೇಹದ ಮೇಲೆ ಅನುಮಾನವಿದೆ ಎಂದು ದೂರಿನಲ್ಲಿ ತಿಳಿಸಲಾಗಿತ್ತು. ಜತೆಗೆ ಪೊಲೀಸ್‌ ಇಲಾಖೆ ಜಿಲ್ಲಾ ಸಹಾಯಕ ಆಯುಕ್ತರಿಗೆ ಪತ್ರ ಬರೆದಿದ್ದರು. ಮೃತದೇಹ ತೆಗೆದು ಡಿಎನ್‌ಎಗೆ ಪರೀಕ್ಷೆ ಕಳಿಸುವಂತೆ ತಾಲೂಕಾಡಳಿತಕ್ಕೆ ಆದೇಶಿಸಲಾಗಿತ್ತು. ಕೋತ್ತದೊಡ್ಡಿ ಗ್ರಾಮದ ಕಾಣೆಯಾದ ದೂರು ಕೊಟ್ಟಿರುವ ಕುಟುಂಬಸ್ಥರ ಸಮ್ಮುಖದಲ್ಲಿ ಹೂತ ಶವ ತೆಗೆಯಲಾಗಿದೆ.

ಮೃತದೇಹ ಡಿಎನ್‌ಎ ಪರೀಕ್ಷೆಗೆ ಹುಬ್ಬಳ್ಳಿಗೆ ಕಳಿಸಲಾಗಿದೆ. ದೂರು ನೀಡಿದವರ ರಕ್ತ ಪರೀಕ್ಷೆ, ಮೃತಪಟ್ಟಿರುವ ವ್ಯಕ್ತಿಯ ಡಿಎನ್‌ಎ ಒಂದೇ ಮಾದರಿಯಲ್ಲಿ ಇದ್ದರೇ ಶವ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗುತ್ತದೆ ಎಂದು ಪಿಐ ಸಣ್ಣಮನಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next