Advertisement
ನಗರದ ಕವಿಸಂನಲ್ಲಿ ಸೋಮವಾರ ಸಂಜೆ ಸಾರ್ವಜನಿಕ ಗಣೇಶೋತ್ಸವ ಮಹಾಮಂಡಳದ ವತಿಯಿಂದ ಹಮ್ಮಿಕೊಂಡಿದ್ದ ಗಣೇಶ ಮಂಡಳಿಗಳಿಗೆ ಬಹುಮಾನ, ಶಾರದಾ-ಶಾಲ್ಮಲಾ ಪ್ರಶಸ್ತಿ ಪ್ರದಾನ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
Related Articles
Advertisement
ಪ್ರಶಸ್ತಿ ಪ್ರದಾನ: ಶಾರದಾ-ಶಾಲ್ಮಲಾ ಪ್ರಶಸ್ತಿಯನ್ನು ಪಿ.ವಿ. ಹಿರೇಮಠ (ಪರಿಸರ), ಡಾ| ಪಿ.ಎಸ್. ಶಿವಕುಮಾರಗೌಡ (ತಾಂತ್ರಿಕ ಸಂಶೋಧನೆ), ರಜನಿದಾಸ್, ವೀಣಾ ಬಸನಗೌಡ, ಡಾ| ಎಂ.ಎನ್. ಹಂಚಿನಮನಿ (ಶಿಕ್ಷಣ), ಡಾ| ಷಡಕ್ಷರಯ್ಯ (ಇತಿಹಾಸ), ಡಾ| ಕಿರಣ ಸಾಣಿಕೊಪ್ಪ (ವೈದ್ಯಕೀಯ,) ಮನೋಹರ ಲಕ್ಕುಂಡಿ, ರವಿ ಹಂದಿಗೋಳ (ಸಮಾಜ ಸೇವೆ), ಪ್ರಭು ಹಂಚಿನಾಳ (ರಂಗಭೂಮಿ),
ಎಸ್.ಜಿಸಣ್ಣಕ್ಕಿ (ಹೋರಾಟ), ಗೀತಾ ಕಟ್ಟಿಮನಿ (ಶಿಕ್ಷಣ), ರಜನಿ ಗುರ್ಲಹೊಸೂರ (ಸಂಗೀತ) ಅವರಿಗೆ ಪ್ರದಾನ ಮಾಡಲಾಯಿತು. ಇದೇ ವೇಳೆ ಉತ್ತಮ ಅಲಂಕಾರ ಮಾಡಿದ 10 ಗಣೇಶ ಮಂಡಳಿಗಳಿಗೆ, ಉತ್ತಮ ಮೂರ್ತಿಗಳಿಗೆ-10 ಹಾಗೂ 50 ಗಣೇಶ ಮಂಡಳಿಗಳಿಗೆ ವಿಶೇಷ ಪುರಸ್ಕಾರ ಬಹುಮಾನ ವಿತರಿಸಲಾಯಿತು.
ಪಾಲಿಕೆ ವಿರೋಧ ಪಕ್ಷದ ನಾಯಕ ಸುಭಾಸ ಶಿಂಧೆ, ಪಾಲಿಕೆ ಸದಸ್ಯರಾದ ದೀಪಕ ಚಿಂಚೋರೆ, ಯಾಸೀನ್ ಹಾವೇರಿಪೇಟ್, ಅಂಜುಮನ್ ಇಸ್ಲಾಂ ಸಂಸ್ಥೆಯ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ, ಮಹೇಶ ಶೆಟ್ಟಿ, ದಾನಪ್ಪ ಕಬ್ಬೇರ, ರಾಬರ್ಟ್ ದದ್ದಾಪುರಿ, ಮುತ್ತುರಾಜ ಮಾಕಡವಾಲೆ, ಶಿವಶಂಕರ ಹಂಪಣ್ಣವರ, ಜಿಲ್ಲಾ ಧಿಕಾರಿ ಡಾ| ಎಸ್.ಬಿ. ಬೊಮ್ಮನಹಳ್ಳಿ,
ಸಾರ್ವಜನಿಕ ಗಣೇಶೋತ್ಸವ ಮಹಾಮಂಡಳದ ಅಧ್ಯಕ್ಷ ಪ್ರಕಾಶ ಘಾಟಗೆ, ಕಾರ್ಯಾಧ್ಯಕ್ಷ ವಸಂತ ಅರ್ಕಾಚಾರ ಹಾಗೂ ಪ್ರಧಾನ ಕಾರ್ಯದರ್ಶಿ ಆನಂದ ಜಾಧವ ಇದ್ದರು. ಕೊನೆಗೆ ಹಾಸ್ಯ ಕಲಾವಿದರಾದ ಮಹಾದೇವ ಸತ್ತೀಗೇರಿ, ರûಾ ಜೋಶಿ, ರಮೇಶ ಗೋಕಾಕ, ಬಾಗೇಶ ಮುರಡಿ ಅವರಿಂದ ಹಾಸ್ಯ ಹಾಗೂ ಸಂಜು ಅವರಿಂದ ಜಾಧೂಗಾರ ಕಾರ್ಯಕ್ರಮ ನಡೆಯಿತು.