Advertisement

Amit Shah ವಿರುದ್ಧ ಗಂಭೀರ ಆರೋಪ: ಜೈರಾಮ್ ರಮೇಶ್ ಬಳಿ ಮಾಹಿತಿ ಕೇಳಿದ ಆಯೋಗ

05:22 PM Jun 02, 2024 | Team Udayavani |

ಹೊಸದಿಲ್ಲಿ: ‘ಜೂನ್ 4 ರಂದು ನಡೆಯಲಿರುವ ಲೋಕಸಭೆ ಚುನಾವಣೆಯ ಮತ ಎಣಿಕೆಗೆ ಮುನ್ನ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು 150 ಜಿಲ್ಲಾಧಿಕಾರಿಗಳು ಮತ್ತು ಕಲೆಕ್ಟರ್‌ಗಳನ್ನು ಕರೆಸಿದ್ದಾರೆ’ ಎಂಬ ಹೇಳಿಕೆಯ ಕುರಿತು ಹಿರಿಯ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರಿಂದ ಚುನಾವಣ ಆಯೋಗ ಭಾನುವಾರ ವಾಸ್ತವಿಕ ಮಾಹಿತಿಯನ್ನು ಕೇಳಿದೆ.

Advertisement

ಚುನಾವಣ ಆಯೋಗ ರಮೇಶ್‌ ಅವರಿಗೆ ಪತ್ರ ಬರೆದಿದ್ದು, ಇಂದು ಸಂಜೆ 7 ಗಂಟೆಯೊಳಗೆ ತಮ್ಮ ಹೇಳಿಕೆಯ ಕುರಿತು ವಿವರಗಳನ್ನು ಹಂಚಿಕೊಳ್ಳುವಂತೆ ಕೇಳಿದೆ.

ಅಮಿತ್ ಶಾ ಅವರು 150 ಅಧಿಕಾರಿಗಳಿಗೆ ಕರೆ ಮಾಡಿದ್ದು ಬಿಜೆಪಿ ಎಷ್ಟು ಹತಾಶವಾಗಿದೆ ಎಂಬುದನ್ನು ತೋರಿಸುತ್ತದೆ ಎಂದು ರಮೇಶ್ ಶನಿವಾರ ಆರೋಪಿಸಿದ್ದರು. ಅಧಿಕಾರಿಗಳು ಒತ್ತಡಕ್ಕೆ ಮಣಿಯದೆ ಸಂವಿಧಾನವನ್ನು ಎತ್ತಿ ಹಿಡಿಯಬೇಕು ಎಂದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next