Advertisement

ಕಪ್ಪುಹಣದಿಂದಲೇ ರಾಜಕೀಯ: ರಾಜಸ್ಥಾನ ಸಿಎಂ ಗೆಹ್ಲೋಟ್

08:45 AM Dec 08, 2019 | Team Udayavani |

ಜೋಧ್‌ಪುರ್‌: ರಾಜಕೀಯ ನಡೆಯುವುದೇ ಕಪ್ಪುಹಣದಿಂದ ಎಂದು ಹೇಳುವ ಮೂಲಕ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್ ಅಚ್ಚರಿ ಮೂಡಿಸಿದ್ದಾರೆ.

Advertisement

ಜೋಧ್‌ಪುರ ಹೈಕೋರ್ಟ್‌ನ ಹೊಸ ಕಟ್ಟಡ ಉದ್ಘಾಟನೆ ವೇಳೆ ಮಾತನಾಡಿದ ಅವರು, ಯಾವನೇ ಹೊಸ ನಾಯಕ ರಾಜಕೀಯ ಪ್ರವೇಶ ಮಾಡಿ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದು ಅಕ್ರಮ ಮೂಲದ ಹಣದಿಂದಲೇ. ಎಲ್ಲಾ ಆಟದ ಮೂಲವೇ ರಕ್ತಸಿಕ್ತ ಹಣ. ಅದನ್ನು ನಿಯಂತ್ರಿಸಬೇಕಾಗಿದೆ ಎಂದು ಹೇಳಿದ್ದಾರೆ. ನ್ಯಾಯಾಲಯದಲ್ಲಿ ಸತ್ಯವನ್ನೇ ಹೇಳಲಾಗುತ್ತದೆ. ಭ್ರಷ್ಟಾಚಾರ ವಿಚಾರಕ್ಕೆ ಬಂದಾಗ ಹಲವಾರು ಮಂದಿ ಸ್ವಯಂ ಪ್ರೇರಿತರಾಗಿ ಸುಪ್ರೀಂಕೋರ್ಟ್‌ಗೆ, ಆದಾಯ ತೆರಿಗೆ ಇಲಾಖೆಗೆ, ಸಿಬಿಐಗೆ, ಜಾರಿ ನಿರ್ದೇಶನಾಲಯಕ್ಕೆ ದೂರು ನೀಡುತ್ತಾರೆ ಎಂದರು. ಈ ಸಂದರ್ಭದಲ್ಲಿ ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎಸ್‌.ಎ.ಬೋಬೆx, ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಕೂಡ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next