Advertisement

Politics:ಕುಮಾರಸ್ವಾಮಿಯನ್ನು ಅರೆಸ್ಟ್ ಮಾಡಲು ಒಬ್ಬ ಕಾನ್ ಸ್ಟೇಬಲ್ ಸಾಕು:ಸಿಎಂ ಸಿದ್ದರಾಮಯ್ಯ

05:21 PM Aug 21, 2024 | Kavyashree |

ಆಲಮಟ್ಟಿ (ವಿಜಯಪುರ): ಹೆಚ್. ಡಿ. ಕುಮಾರಸ್ವಾಮಿ ಅವರನ್ನು ಅರೆಸ್ಟ್ ಮಾಡೋದು ಸಿದ್ದರಾಮಯ್ಯ ಅಲ್ಲ. ಅವರನ್ನು ಅರೆಸ್ಟ್ ಮಾಡಲು ಒಬ್ಬ ಕಾನ್ ಸ್ಟೇಬಲ್ ಸಾಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

Advertisement

ಆಲಮಟ್ಟಿ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಹೆದರಿರುವುದರಿಂದಲೇ ಪ್ರೆಸ್ ಮೀಟ್ ಮಾಡಿದ್ದಾರೆ. ಅವರು ಯಾವಾಗಲೂ ಹಿಟ್ ಅಂಡ್ ರನ್. ಯಾವುದನ್ನೂ ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುವುದಿಲ್ಲ. ಪೆನ್ ಡ್ರೈವ್ ಇದೆ ಅಂತಿದ್ರು. ಆ ಪೆನ್ ಡ್ರೈವ್ ಎಲ್ಲಿದೆ ಎಂದು ಪ್ರಶ್ನಿಸಿದರು.

ಮುಡಾದಲ್ಲಿ ನಾನು ಯಾವ ತಪ್ಪು ಮಾಡಿಲ್ಲ. ಯಾವ ಪತ್ರ ಬರೆದಿದ್ದೇನಾ?, ಆಗ ನಾನು ಸಚಿವ, ಸಿಎಂ ಆಗಿದ್ದೆನಾ?, ಮುಡಾ ಸೈಟ್ ಹಂಚಿಕೆ ಮಾಡಿದಾಗ ಇದ್ದವರು ಬಿಜೆಪಿ, ಜೆಡಿಎಸ್ ನವರು. ಆಗ ಸಿಎಂ ಬೊಮ್ಮಾಯಿ ಇದ್ದರು. ಮುಡಾ ಬಗ್ಗೆ ಸಮಿತಿ ರಚನೆ ಮಾಡಿದ್ದೇವೆ. ಸಮಿತಿ ವರದಿ ಬಂದ ಬಳಿಕ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next