Advertisement

ನರೇಂದ್ರ ಮೋದಿ ಸರ್ಕಾರದಿಂದ  ರಾಜಕೀಯ ಭಯೋತ್ಪಾದನೆ: ಎಚ್‌ಡಿಕೆ

10:34 AM Apr 28, 2017 | Team Udayavani |

ಹುಬ್ಬಳ್ಳಿ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರಾಜಕೀಯ ವಿರೋಧಿಗಳನ್ನು ಸದೆಬಡಿಯಲು ಸಾಂವಿಧಾನಿಕ ಸಂಸ್ಥೆಗಳ ದುರ್ಬಳಕೆ ಮೂಲಕ ರಾಜಕೀಯ ಭಯೋತ್ಪಾದನೆ ಆರಂಭಿಸಿದೆ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಆರೋಪಿಸಿದರು.

Advertisement

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜರ್ಮನ್‌ನಲ್ಲಿ ಹಿಟ್ಲರ್‌ ಆಳ್ವಿಕೆ ಆರಂಭದಲ್ಲಿ ಇಡೀ ಜನಸಮೂಹವೇ ಹಿಟ್ಲರ್‌..ಹಿಟ್ಲರ್‌.. ಎಂದು ಘೋಷಣೆ ಮೂಲಕ ಬೆಂಬಲ ತೋರಿತ್ತು. ಆದರೆ ಜನ ಹಿಟ್ಲರ್‌ನ ನೈಜ ರೂಪ ಅರಿಯುವುದರೊಳಗೆ ಬಹುದೊಡ್ಡ ಅನಾಹುತವೇ ನಡೆದು ಹೋಗಿತ್ತು. ಇದೀಗ ದೇಶದ ಎಲ್ಲ ಕಡೆಗೂ ಜನ ಮೋದಿ..ಮೋದಿ.. ಎಂದು ಕೂಗುತ್ತಿದ್ದಾರೆ. ಮೋದಿ ಸಹ ಹಿಟ್ಲರ್‌ ಹಾದಿಯಲ್ಲಿ ಸಾಗುತ್ತಿದ್ದಾರೆ ಎನಿಸುತ್ತಿದೆ ಎಂದರು.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ ಯಾರೊಂದಿಗೂ ಮೈತ್ರಿ ಮಾಡಿಕೊಳ್ಳದೆ 224 ಕ್ಷೇತ್ರಗಳಿಗೂ ಸ್ಪರ್ಧಿಸಲಿದೆ. ಪಕ್ಷದ 120 ಅಭ್ಯರ್ಥಿಗಳ ಪಟ್ಟಿ ಸಿದ್ದ ಇದ್ದು, ಮೇ ಕೊನೇ ಇಲ್ಲವೆ ಜೂನ್‌ ಮೊದಲ ವಾರ ಹುಬ್ಬಳ್ಳಿಯಲ್ಲಿ ರೈತ ಸಮಾವೇಶದ ಮೂಲಕ ಮೊದಲ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು. 

ಉತ್ತರ ಕರ್ನಾಟಕದಲ್ಲಿ ಸ್ಪರ್ಧಿಸುವಂತೆ ನನ್ನ ಮೇಲೆ ಒತ್ತಡವಿದೆ. ಪರಿಸ್ಥಿತಿ ನೋಡಿಕೊಂಡು ತೀರ್ಮಾನ ಕೈಗೊಳ್ಳುವೆ.ಅನಿವಾರ್ಯವಾದರೆ ಖಂಡಿತವಾಗಿಯೂ ಸ್ಪರ್ಧೆ ಮಾಡುವುದಾಗಿ  ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next