Advertisement

ಕಲಬುರಗಿ: ಪೊಲೀಸ್‌ ಆಯ್ಕೆ ವೇಳೆ ಕುಸಿದು ಬಿದ್ದು ಯುವಕ ಸಾವು

10:44 AM Jan 31, 2018 | Team Udayavani |

ಕಲಬುರಗಿ: ಕೆಎಸ್‌ಆರ್‌ಪಿ ಪೇದೆಗಳ ಆಯ್ಕೆ ಪ್ರಕ್ರಿಯೆಗೆ ದೈಹಿಕ ಪರೀಕ್ಷೆ ನಡೆಸುತ್ತಿದ್ದ ವೇಳೆ ಅಭ್ಯರ್ಥಿಯೊಬ್ಬರು ಕುಸಿದು ಬಿದ್ದು ದಾರುಣವಾಗಿ ಸಾವನ್ನಪ್ಪಿದ ಘಟನೆ ಬುಧವಾರ ನಡೆದಿದೆ.

Advertisement

ವೇಗದ ಓಟ ಪರೀಕ್ಷೆ ವೇಳೆ  ಬೀದರ್‌ನ ಬಸವಕಲ್ಯಾಣದ ವಿಕಾಸ್‌ ಗಾಯಕವಾಡ್‌ ಎಂಬ ಯುವಕ ಕುಸಿದು ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿರುವುದಾಗಿ  ವರದಿಯಾಗಿದೆ. 

ಸ್ಥಳಕ್ಕೆ ಈಶಾನ್ಯ ವಲಯ ಐಜಿಪಿ ಮುರುಗನ್‌ , ಎಸ್‌.ಪಿ ಶಶಿಕುಮಾರ್‌ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

ಹೃದಯಾಘಾತದಿಂದ ಸಾವನ್ನಪ್ಪಿರುವುದಾಗಿ ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next