Advertisement

ಮೇ 31ರ ವರೆಗೆ ಜಿಲ್ಲೆಯ ಗಡಿಯಲ್ಲಿ ಶಿಕ್ಷಕರು, ಪಂ.ಸಿಬಂದಿ

08:47 PM May 21, 2020 | Team Udayavani |

ಬೆಳ್ಮಣ್‌: ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಜಿಲ್ಲೆಯ ಗಡಿ ಭಾಗಗಳ ವಿವಿಧ ಚೆಕ್‌ಪೋಸ್ಟ್‌ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್‌ ಸಿಬಂದಿಯನ್ನು ಮೇ 21ರಿಂದ ಬಿಡುಗಡೆಗೊಳಿಸಿ ಕ್ವಾರಂಟೈನ್‌ ಕೇಂದ್ರಗಳಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿದೆ.ಇದೀಗ ಮೇ. 31ರವರೆಗೆ ಈ ಚೆಕ್‌ಪೋಸ್ಟ್‌ ಗಳಲ್ಲಿ ಜಿಲ್ಲಾಡಳಿತ ನಿಯೋಜಿಸಲಾದ ಅಧ್ಯಾಪಕರು ಹಾಗೂ ಪಂಚಾಯತ್‌ ಸಿಬಂದಿ ಮಾತ್ರ ಗಡಿ ಕಾಯಬೇಕಾದ ಸ್ಥಿತಿಯೊದಗಿದೆ.

Advertisement

ಲಾಕ್‌ಡೌನ್‌ ಸಂದರ್ಭ ಉಡುಪಿ ಜಿಲ್ಲೆಗಳ ಗಡಿಭಾಗಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ಇದ್ದುದರಿಂದ ರಾಜ್ಯದ ಇತರ ಜಿಲ್ಲೆಗಳಿಗಿಂತ ಉಡುಪಿ ಜಿಲ್ಲೆ ಕೋವಿಡ್ 19 ನಿಯಂತ್ರಣದಲ್ಲಿದೆ.ಚೆಕ್‌ಪೋಸ್ಟ್‌ ಗಳಲ್ಲಿನ ಪೊಲೀಸ್‌ ಸಿಬಂದಿಗಳು, ಅಧ್ಯಾಪಕರು ಹಾಗೂ ಪಂಚಾಯತ್‌ ಸಿಬಂದಿ ಬದ್ಧತೆಯಿಂದ ಈ ನಿಯಂತ್ರಣ ಸಾಧ್ಯವಾಗಿದ್ದು ಇದೀಗ ಲಾಕ್‌ಡೌನ್‌ ಸಡಿಲಿಕೆಯಾಗಿದ್ದು ಇದೀಗ ಚೆಕ್‌ಪೋಸ್ಟ್‌ ಗಳ ಅನಿವಾರ್ಯವೂ ಇಲ್ಲವಾದಂತಿದೆ.

ಗುರುವಾರದಿಂದ ಪೊಲೀಸರ ಸೇವೆಯೂ ಇಲ್ಲವಾಗಿದ್ದು ಎಲ್ಲ ಚೆಕ್‌ ಪೋಸ್ಟ್‌ಗಳ ಚಟುವಟಿಕೆಗಳು ನೀರಸವಾಗಿವೆ. ಇನ್ನು ಕೋವಿಡ್ 19 ನಿಯಂತ್ರಣ ಸ್ವಯಂ ಅವರವರ ಕೈಯಲ್ಲಿ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದ್ದು ಇನ್ನು ಚೆಕ್‌ಪೋಸ್ಟ್‌ಗಳ ಅಗತ್ಯ ಇಲ್ಲ ಎಂಬಂತಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next