Advertisement

Subrahmanya ಜೂಜಾಟ ಅಡ್ಡೆಗೆ ಪೊಲೀಸ್‌ ದಾಳಿ; ಓರ್ವ ವಶಕ್ಕೆ

12:05 AM Aug 29, 2023 | Team Udayavani |

ಸುಬ್ರಹ್ಮಣ್ಯ: ಹಣವನ್ನು ಪಣಕ್ಕಿಟ್ಟು ಲೂಡದ ದಾಳವನ್ನು ಉಪಯೋಗಿಸಿ ಆಡುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ ಓರ್ವನನ್ನು ವಶಕ್ಕೆ ಪಡೆದಿದ್ದು, ಮೂವರು ಪರಾರಿಯಾದ ಘಟನೆ ಕೊಲ್ಲಮೊಗ್ರುವಿನ ಬಸ್ಸು ನಿಲ್ದಾಣದ ಬಳಿ ಆ. 26ರಂದು ನಡೆದಿದೆ.

Advertisement

ಜೂಜಾಟ ಆಟ ಆಡುತ್ತಿರುವ ಖಚಿತ ಮಾಹಿತಿ ಮೇರೆಗೆ ಸುಬ್ರಹ್ಮಣ್ಯ ಠಾಣಾ ಎಸ್ಸೆ ಸಿಬಂದಿಯೊಂದಿಗೆ ದಾಳಿ ನಡೆಸಿದ್ದಾರೆ. ಕಿರಣ್‌ನನ್ನು ವಶಕ್ಕೆ ಪಡೆದಿದ್ದು. ಆಡುತ್ತಿದ್ದ ಕುಮಾರ್‌ ಗಡಿಕಲ್ಲು, ಅವಿನ್‌ ಗಡಿಕಲ್ಲು, ಲಕ್ಷ್ಮಣ ಕಡೋಡಿ ಪರಾರಿಯಾಗಿದ್ದಾರೆ.

ಅದೃಷ್ಟದ ಆಟಕ್ಕೆ 1,350 ರೂ. ಹಾಗೂ ಲೂಡದ ದಾಳ-1, ರಟ್ಟಿನ ತುಂಡು -1 ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next