Advertisement

ಸೋಮವಾರಪೇಟೆ: ಮತದಾನ ಜಾಗೃತಿಗೆ ಪೊಲೀಸ್‌ಪಥಸಂಚಲನ

02:15 AM Apr 18, 2019 | sudhir |

ಸೋಮವಾರಪೇಟೆ: ಲೋಕ ಸಭಾ ಚುನಾವಣಾ ಹಿನ್ನೆಲೆ ಸಾರ್ವ ಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಬಿಎಸ್‌ಎಫ್ ಸೇರಿದಂತೆ ಪೊಲೀಸ್‌ ಸಿಬಂದಿ ಪಟ್ಟಣದಲ್ಲಿ ಪಥಸಂಚಲನ ನಡೆಸಿದರು.

Advertisement

ಮತದಾನದ ಬಗ್ಗೆ ಜಾಗೃತಿ, ಹಾಗೂ ಸಾರ್ವಜನಿಕ ವಲಯದಲ್ಲಿ ಭಯಾತಂಕವನ್ನು ದೂರ ಮಾಡುವ ಉದ್ದೇಶದಿಂದ ನಡೆಸಲಾದ ಪಥ ಸಂಚಲನದಲ್ಲಿ ಬಿಎಸ್‌ಎಫ್ನ ಯೋಧರು, ಕೆಎಸ್‌ಆರ್‌ಪಿ ತುಕಡಿ, ಜಿಲ್ಲಾ ಸಶಸ್ತ್ರ ದಳ, ಸ್ಥಳೀಯ ಪೊಲೀಸರು ಸೇರಿದಂತೆ ಸುಮಾರು 120 ಸಿಬಂದಿ ಶಸ್ತ್ರ ಸಜ್ಜಿತರಾಗಿ ಭಾಗವಹಿಸಿದ್ದರು.

ಇಲ್ಲಿನ ಕಕ್ಕೆಹೊಳೆ, ಮಾನಸ ಸಭಾಂಗಣ ರಸ್ತೆ, ಸಿ.ಕೆ. ಸುಬ್ಬಯ್ಯ ರಸ್ತೆ, ಪುಟ್ಟಪ್ಪ ಸರ್ಕಲ್‌, ಮಡಿಕೇರಿ ರಸ್ತೆ, ಅಂಬೇಡ್ಕರ್‌ ಸರ್ಕಲ್‌, ಮುಖ್ಯರಸ್ತೆ, ಖಾಸಗಿ ಬಸ್‌ ನಿಲ್ದಾಣ, ಜೇಸೀ ವೇದಿಕೆ ಮೂಲಕ ಪೊಲೀಸ್‌ ಠಾಣೆಯವರೆಗೆ ಪಥ ಸಂಚಲನ ನಡೆಯಿತು. ಪೊಲೀಸ್‌ ವೃತ್ತ ನಿರೀಕ್ಷಕ ನಂಜುಂಡೇಗೌಡ, ಠಾಣಾಧಿಕಾರಿ ಶಿವಶಂಕರ್‌, ಪೊ›ಬೇಷನರಿ ಠಾಣಾಧಿಕಾರಿ ಮೋಹನ್‌ ರಾಜ್‌ ಅವರುಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next