Advertisement

ಶಿವಮೊಗ್ಗದಲ್ಲಿ ಮತ್ತೇ ಮೊಳಗಿದ ಗುಂಡಿನ ಸದ್ದು: ರೌಡಿಶೀಟರ್ ಕಾಲಿಗೆ ಪೋಲಿಸರ ಗುಂಡೇಟು

11:40 AM Dec 19, 2022 | Team Udayavani |

ಶಿವಮೊಗ್ಗ: ಶಿವಮೊಗ್ಗದಲ್ಲಿ ಮತ್ತೆ ಪೊಲೀಸರ ಗುಂಡಿನ ಸದ್ದು ಮೊಳಗಿದೆ. ಬೆಳ್ಳಂಬೆಳಿಗ್ಗೆ ರೌಡಿಶೀಟರ್ ಕಾಲಿಗೆ ಪೋಲಿಸರು ಗುಂಡು ಇಳಿಸಿದ್ದಾರೆ.

Advertisement

ರೌಡಿಶೀಟರ್ ಪ್ರವೀಣ್ ಅಲಿಯಾಸ್ ಮೋಟು ಕಾಲಿಗೆ ಪೊಲೀಸರು ಗುಂಡು ಇಳಿಸಿದ್ದಾರೆ. ಪ್ರಕರಣವೊಂದರಲ್ಲಿ ಬಂಧನಕ್ಕೆ ತೆರಳಿದ್ದ ವೇಳೆ ಪೊಲೀಸರ ಮೇಲೆ ಪ್ರವೀಣ್ ಹಲ್ಲೆಗೆ ಮುಂದಾಗಿದ್ದ. ಗ್ರಾಮಾಂತರ ಠಾಣೆ ಪೊಲೀಸ್ ಕ್ರೈಂ ಸಿಬ್ಬಂದಿ ಶಿವರಾಜ್ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದ.

ಶಿವಮೊಗ್ಗ ಗ್ರಾಮಾಂತರ ಠಾಣೆ ಪಿಎಸ್ಐ ರಮೇಶ್ ಎಚ್ಚರಿಕೆ ನೀಡಿದರೂ ಮೋಟು ಪ್ರವೀಣ್ ನಿರ್ಲಕ್ಷ್ಯ ಮಾಡಿದ್ದು, ತನ್ನ ಸಿಬ್ಬಂದಿ ರಕ್ಷಣೆಗಾಗಿ ಪಿಎಸ್ಐ ರಮೇಶ್ ಅವರು ಮೋಟು ಪ್ರವೀಣ್ ಕಾಲಿಗೆ ಫೈರ್ ಮಾಡಿದ್ದಾರೆ. ಗುಂಡೇಟು ತಿಂದ ಪ್ರವೀಣ್ ಹಾಗೂ ಪೊಲೀಸ್ ಸಿಬ್ಬಂದಿಯನ್ನು ಮೆಗ್ಗಾನ್ ಗೆ ದಾಖಲಿಸಲಾಗಿದೆ.

ಇದನ್ನೂ ಓದಿ:ʼಕ್ರಾಂತಿʼ ಆಡಿಯೋ ಬಿಡುಗಡೆ ವೇಳೆ ದರ್ಶನ್‌ ಬ್ಯಾನರ್‌ಗೆ ಹಾನಿ, ಚಪ್ಪಲಿ ಎಸೆತ; ಭುಗಿಲೆದ್ದ ಆಕ್ರೋಶ

ರೌಡಿ ಪ್ರವೀಣ್ ಮೂರು ತಿಂಗಳ ಹಿಂದೆ ಸಾರ್ವಜನಿಕವಾಗಿ ಮಹಿಳೆಯನ್ನು ಥಳಿಸಿದ್ದ. ಈ ಪ್ರಕರಣದಲ್ಲಿ ಜೈಲಿಗೆ ಹೋಗಿ ಜಾಮೀನು ಮೇಲೆ ಹೊರಬಂದಿದ್ದ. ದೂರು ಕೊಟ್ಟಿದ್ದ ಮಹಿಳೆಯ ಮನೆಯ ಮುಂದೆ ನಿಂತಿದ್ದ ಹೊಸ ಕಾರನ್ನು ಸುಟ್ಟು ಆಕೆಯ ವಿರುದ್ದ ರೌಡಿಶೀಟರ್ ಪ್ರವೀಣ್ ಸೇಡು ತೀರಿಸಿಕೊಂಡಿದ್ದ.  ಕೇಸ್ ವಾಪಸ್ ಪಡೆಯಲು ತಾಯಿ- ಮಗನಿಗೆ ಜೀವ ಬೆದರಿಕೆ ಹಾಕಿದ್ದ, ಈ ಸಂಬಂಧ ದೊಡ್ಡಪೇಟೆ ಠಾಣೆಯಲ್ಲಿ ಮತ್ತೊಂದು ದೂರು ದಾಖಲಾಗಿತ್ತು.

Advertisement

ಈ ಪ್ರಕರಣದಡಿ ಬಂಧಿಸಲು ತೆರಳಿದ್ದ ವೇಳೆ ಪೊಲೀಸರೊಂದಿಗೆ ಮೋಟು ಕಿರಿಕ್ ಮಾಡಿ ಗುಂಡಿನ ಏಟು ತಿಂದಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next