Advertisement

ನಾಪತ್ತೆಯಾಗಿದ್ದ ಇನ್‌ಸ್ಪೆಕ್ಟರ್‌ ಭಿಕ್ಷುಕನಾಗಿ ಪತ್ತೆ!

11:29 PM Nov 15, 2020 | mahesh |

ಮುಂಬಯಿ: ಇವರಿಗಾಗಿ ಕಳೆದ 15 ವರ್ಷ ಗಳಿಂದಲೂ ಮಧ್ಯಪ್ರದೇಶದ ಪೊಲೀಸರು ಹುಡುಕದ ಜಾಗವೇ ಇಲ್ಲ! ಆದರೆ, ಎಲ್ಲೂ ಅವರ ಸುಳಿವು ಸಿಗದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಹುಡುಕಾಟ ಸ್ಥಗಿತಗೊಳಿಸಿದ್ದರು. ಹಾಗಾದರೆ, ಇವರು ಯಾರಿರಬಹುದು ಎಂದು ಯೋಚಿಸುತ್ತಿದ್ದೀರಾ? ಇವರು ಮಧ್ಯಪ್ರದೇಶದ ಪೊಲೀಸ್‌ ಅಧಿಕಾರಿಯಾಗಿದ್ದ ಮನೀಶ್‌ ಮಿಶ್ರಾ. 15 ವರ್ಷಗಳಿಂದಲೂ ಕಣ್ಮರೆಯಾಗಿದ್ದ ಮಿಶ್ರಾ ಈಗ ಗ್ವಾಲಿಯರ್‌ನ ಫ‌ುಟ್‌ಪಾತ್‌ನಲ್ಲಿ ಭಿಕ್ಷೆ ಬೇಡುತ್ತಿದ್ದಾಗ ಪತ್ತೆಯಾಗಿದ್ದಾರೆ.

Advertisement

ಇತ್ತೀಚೆಗೆ ಡಿಎಸ್ಪಿ ರತ್ನೆಶ್‌ ಸಿಂಗ್‌ ತೋಮರ್‌ ಮತ್ತು ವಿಜಯ್‌ ಭಡೋರಿಯಾ ಅವರು ಫ‌ುಟಾ³ತ್‌ನಲ್ಲಿ ಚಳಿಯಿಂದ ನಡುಗುತ್ತಿದ್ದ ಭಿಕ್ಷುಕನಿಗೆ ನೆರವಾಗಲೆಂದು ಧಾವಿಸಿದ್ದರು. ಭಿಕ್ಷುಕನಿಗೆ ಜಾಕೆಟ್‌ ನೀಡಿ, ಅವನ ಬಗ್ಗೆ ವಿಚಾರಿಸುತ್ತಿದ್ದಾಗ ಏಕಾಏಕಿ ಆತ ಅಲ್ಲಿದ್ದ ಡಿಎಸ್ಪಿಯನ್ನು “ತೋಮರ್‌’ ಎಂದು ಉಲ್ಲೇಖೀಸಿ ಮಾತನಾಡಿದ್ದ. “ಭಿಕ್ಷುಕನಿಗೆ ನನ್ನ ಹೆಸರು ಹೇಗೆ ತಿಳಿಯಿತು’ ಎಂದು ಚಿಕತರಾದ ತೋಮರ್‌ಗೆ ಆಘಾತ ಕಾದಿತ್ತು. ತಮ್ಮೆದುರು ಕುಳಿತಿದ್ದ ಆ ಭಿಕ್ಷುಕ ಬೇರಾರೂ ಅಲ್ಲ, ಒಂದು ಕಾಲದಲ್ಲಿ ತಮ್ಮದೇ ಸಹೋದ್ಯೋಗಿಯಾಗಿದ್ದ ಇನ್‌ಸ್ಪೆಕ್ಟರ್‌ ಮನೀಶ್‌ ಮಿಶ್ರಾ ಎಂಬುದು ತಿಳಿಯಿತು.

ಮಾನಸಿಕವಾಗಿ ಅಸ್ವಸ್ಥರಾಗಿದ್ದ ಮಿಶ್ರಾರನ್ನು ತಮ್ಮೊಂದಿಗೆ ಕರೆದೊಯ್ಯಲು ಯತ್ನಿಸಿ ವಿಫ‌ಲವಾದ ತೋಮರ್‌ ಮತ್ತು ವಿಜಯ್‌, ಕೊನೆಗೆ ಅವರನ್ನು ಸ್ಥಳೀಯ ಆಶ್ರಯ ತಾಣಕ್ಕೆ ಸೇರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next