Advertisement

ಉತ್ತರಪ್ರದೇಶ: ಯತಿ ನರಸಿಂಗಾನಂದ್‌ಗೆ ನೋಟಿಸ್‌ ನೀಡಿದ ಸ್ಥಳೀಯ ಪೊಲೀಸರು

06:12 PM Nov 04, 2022 | Team Udayavani |

ಘಾಜಿಯಬಾದ್‌: ಉತ್ತರಪ್ರದೇಶದ ಘಾಜಿಯಬಾದ್‌ನಲ್ಲಿ ಡಿ.17ರಿಂದ ಮೂರು ದಿನ ಧರ್ಮಸಂಸದ್‌ ಹಮ್ಮಿಕೊಳ್ಳಲು ಯತಿ ನರಸಿಂಗಾನಂದ ತೀರ್ಮಾನಿಸಿದ್ದಾರೆ.

Advertisement

ಅದರ ವಿರುದ್ಧ ಸ್ಥಳೀಯ ಪೊಲೀಸರು ನೋಟಿಸ್‌ ನೀಡಿದ್ದಾರೆ. ಸಮ್ಮೇಳನಕ್ಕೆ ಜಿಲ್ಲಾಡಳಿತದಿಂದ ಪೂರ್ವಾನುಮತಿ ಪಡೆದಿಲ್ಲ. ಅದೇ ವೇಳೆ ಚುನಾವಣೆಯೂ ಇರುವುದರಿಂದ ನೂರಾರು ಮಂದಿ ಸಂತರು ಭಾಗವಹಿಸುವ ಸಮ್ಮೇಳನಕ್ಕೆ ಮುಂಚಿತವಾಗಿ ತಿಳಿಸದಿದ್ದರೆ ಭದ್ರತೆ ನೀಡುವುದು ಕಷ್ಟ ಎನ್ನುವುದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸೂಚಿಸಿದ್ದಾರೆ.

ಆದರೆ, ಪೊಲೀಸರ ಕ್ರಮಕ್ಕೆ ನರಸಿಂಗಾನಂದ ಆಕ್ಷೇಪ ಮಾಡಿದ್ದು, ದಸ್ನಾ ದೇಗುಲದ ಆವರಣದಲ್ಲಿ ಕಾರ್ಯಕ್ರಮ ನಡೆಯಲಿದೆ. ಹೀಗಾಗಿ, ಪೊಲೀಸ್‌ ಇಲಾಖೆಯ ಅನುಮತಿ ಅಗತ್ಯವಿಲ್ಲ ಎಂದು ವಾದಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next