Advertisement
ಬ್ರಿಟನ್ನ ಗೃಹ ಇಲಾಖೆಯು ಲಂಡನ್ನಲ್ಲಿ ಆಯೋಜಿಸಿದ್ದ 3 ದಿನಗಳ “ನಿಗಾ ವ್ಯವಸ್ಥೆಗೆ ತಂತ್ರಜ್ಞಾನದ ಬಳಕೆ’ ಎಂಬವಸ್ತುಪ್ರದರ್ಶನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಪ್ರಧಾನ ಕಾರ್ಯದರ್ಶಿ(ಗೃಹ)
ಸುಭಾಶ್ಚಂದ್ರ ಹಾಗೂ ಗೃಹ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಪರಮೇಶ್ವರ್ ಅವರು ಲಂಡನ್ಗೆ
ತೆರಳಿದ್ದಾರೆ.
“ಇಲ್ಲಿರುವ ಅತ್ಯಾಧುನಿಕ ಸಂವಹನ ತಂತ್ರಜ್ಞಾನಗಳನ್ನು ನಮ್ಮ ಪೊಲೀಸ್ ವ್ಯವಸ್ಥೆಯಲ್ಲೂ ಬಳಸಿಕೊಳ್ಳುವ ಉದ್ದೇಶ
ಹೊಂದಿದ್ದೇನೆ’ ಎಂದಿದ್ದಾರೆ. ಬಳಿಕ, ಥೇಮ್ಸ್ ನದಿ ತಟದಲ್ಲಿರುವ ಬಸವೇಶ್ವರರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಅವರು, “ಬ್ರಿಟನ್ ಸಂಸತ್ನ ಹಿಂಭಾಗದಲ್ಲೇ ಇರುವ ಸಮಾಜ ಸುಧಾರಕ ಬಸವಣ್ಣನ ಪ್ರತಿಮೆ ಹಾಗೂ ಲಂಡನ್ನ
ಹೃದಯಭಾಗದಲ್ಲಿರುವ ಡಾ. ಬಿ. ಆರ್. ಅಂಬೇಡ್ಕರ್ ಅವರ ಮ್ಯೂಸಿಯಂ ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆ ತರುವ ವಿಚಾರ,’ ಎಂದರು.