Advertisement

ಮುದ್ದೇಬಿಹಾಳ ಬಟ್ಟೆ ಅಂಗಡಿ ದರೋಡೆ ತಡೆದ ಗೂರ್ಖಾಗೆ ಪೊಲೀಸ್ ಸನ್ಮಾನ

02:40 PM Oct 13, 2020 | keerthan |

ವಿಜಯಪುರ: ಮುದ್ದೇಬಿಹಾಳದ ಪಟ್ಟಣದಲ್ಲಿ ಬಟ್ಟೆ ಅಂಗಡಿ ದರೋಡೆ ತಡೆಯುವಲ್ಲಿ ಯಶಸ್ವಿಯಾದ ಗೂರ್ಖಾನನ್ನು ಪೊಲೀಸ್ ಇಲಾಖೆ ಸನ್ಮಾನಿಸಿ ಗೌರವಿಸಿದೆ.

Advertisement

ಮಂಗಳವಾರ ಮುದ್ದೇಬಿಹಾಳ ಪೊಲೀಸ್ ಠಾಣೆ ಆವರಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಸನ್ಮಾನ ಮಾಡಲಾಯಿತು. ಮುದ್ದೇಬಿಹಾಳ ಪಟ್ಟಣದಲ್ಲಿ ಈಚೆಗೆ ಬಟ್ಟೆ ಅಂಗಡಿ ಬೀಗ ಮುರಿದು ದರೋಡೆಗೆ ಯತ್ನಿಸಲಾಗಿತ್ತು. ಇದನ್ನು ನೋಡಿದ ರಾತ್ರಿ ಗಸ್ತಿನಲ್ಲಿದ್ದ ಗೂರ್ಖಾ ಶೇರ್ ಬಹಾದ್ದೂರ ಸಿಂಗ್ ಕಳ್ಳನನ್ನು ಸೆರೆ ಹಿಡಿದು ಕಳ್ಳತನ ತಪ್ಪಿಸಿದ್ದರು.

ಈ ಸಾಹಸ ಪ್ರದರ್ಸಿಸಿದ ಗೂರ್ಖಾ ಶೇರ ಬಹಾದ್ದೂರಸಿಂಗ್ ಅವರನ್ನು ಬಸವನಬಾಗೇವಾಡಿ ಪೊಲೀಸ್ ವೃತ್ತದ ಡಿವೈಎಸ್ಪಿ ಈ.ಶಾಂತವೀರ ಅವರು ಪೊಲೀಸ್ ಇಲಾಖೆಯಿಂದ ಸನ್ಮಾನಿಸಿ ಪ್ರೋತ್ಸಾಹಿಸಿದರು.

ಇದನ್ನೂ ಓದಿ:ಫೋರ್ಬ್ಸ್ ಪಟ್ಟಿಯಲ್ಲಿ ಬೆಳಗಾವಿಯ ಶ್ರೀಶೈಲ ಧನವಡೆಗೆ ಸ್ಥಾನ

ಈ ವೇಳೆ ಮಾತನಾಡಿದ ಡಿಎಸ್ಪಿ ಶಾಂತವೀರ, ಗೂರ್ಖಾನ ಸಾಹಸ, ಕರ್ತವ್ಯ ಪ್ರಜ್ಞೆ ಪೊಲೀಸರಲ್ಲಿ ಬರಬೇಕು ಎಂದು ಕಿವಿಮಾತು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next