Advertisement

ಬಾಗಲಕೋಟೆ:ಎಸ್‌ಪಿ ನಿವಾಸದ ಎದುರೇ ಗುಂಡಿಟ್ಟುಕೊಂಡು ಪೇದೆ ಆತ್ಮಹತ್ಯೆ

08:04 AM Dec 01, 2018 | Team Udayavani |

ಬಾಗಲಕೋಟೆ: ನಗರದಲ್ಲಿರುವ ಎಸ್‌ಪಿ ನಿವಾಸದ ಎದುರು ಕಾವಲಿಗಿದ್ದ ಪೇದೆಯೊಬ್ಬರು ಸ್ವಯಂ ಗುಂಡಿಟ್ಟುಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಶನಿವಾರ ಪತ್ತೆಯಾಗಿದ್ದಾರೆ. 

Advertisement

ಎಸ್‌ಪಿ ನಿವಾಸದ ಭದ್ರತೆಗಿದ್ದ ಕೊಪ್ಪಳ ಜಿಲ್ಲೆಯ ಕುಷ್ಠಗಿಯ ಮಿಟ್ಟಲಕೋಡ ಗ್ರಾಮದ ನಿವಾಸಿಯಾಗಿರುವ ಮಂಜು ಹರಿಜನ(28) ಆತ್ಮಹತ್ಯೆ ಮಾಡಿಕೊಂಡ  ಪೇದೆ.

ಕರ್ತವ್ಯಕ್ಕೆ ನೀಡಲಾಗಿದ್ದ 303 ರೈಫ‌ಲ್‌ನಿಂದ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ಸ್ಥಳಕ್ಕೆ ಎಸ್‌ಪಿ ಸಿ.ಬಿ.ರಿಷ್ಯಂತ್‌ ಸಹಿತ, ಪೊಲೀಸ್‌ ಅಧಿಕಾರಿಗಳು, ಬೆರಳಚ್ಚು ತಜ್ಞರು, ಶ್ವಾನದಳ ಆಗಮಿಸಿ ಪರಿಶೀಲನೆ ನಡೆಸಿದ್ದು , ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಯಾವ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿಲ್ಲ. ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next