Advertisement

ಭಾವಿ ಪತ್ನಿ ಪೋನ್ ಮಾಡಿಲ್ಲವೆಂದು ಮನನೊಂದ ಪೇದೆ ಆತ್ಮಹತ್ಯೆಗೆ ಶರಣು

07:58 PM May 10, 2021 | Team Udayavani |

ಲಿಂಗಸುಗೂರು (ರಾಯಚೂರು): ಭಾವಿ ಪತ್ನಿ ಮೂರು ದಿನದಿಂದ ಫೋನ್ ಮಾಡದ್ದಕ್ಕೆ ಮನನೊಂದು ಪೇದೆ ಆತ್ಮಹತ್ಯೆಗೆ ಶರಣಾದ ಘಟನೆ ತಾಲೂಕಿನ ಕೆಸರಟ್ಟಿ ತಾಂಡಾದಲ್ಲಿ  ರವಿವಾರ ರಾತ್ರಿ ನಡೆದಿದೆ.

Advertisement

ಚೆನ್ನಪ್ಪ ರಾಠೋಡ್ (28) ಮೃತ ಪೇದೆ. ಈಚನಾಳ ತಾಂಡಾದ ನಿವಾಸಿ ಚನ್ನಪ್ಪ ರಾಠೋಡ್ ಬೆಂಗಳೂರಿನಲ್ಲಿ  ರಾಜ್ಯ ಗುಪ್ತವಾರ್ತೆಯಲ್ಲಿ ಸೇವೆ ಸಲ್ಲಿಸುತ್ತಿದ್ದ.

ಐದು ತಿಂಗಳ ಹಿಂದೆ  ಹುಣಸಗಿ ತಾಲೂಕಿನ ಕಕ್ಕೇರಿ ತಾಂಡಾದ ಯುವತಿ ಜತೆ ಮದುವೆ ನಿಶ್ಚಯವಾಗಿತ್ತು. ಆದರೆ, ಮೂರು ದಿನದಿಂದ ಭಾವಿ ಪತ್ನಿ ಪೋನ್ ನಲ್ಲಿ ಮಾತಾಡಿಲ್ಲ ಎಂದು ಕೆಸರಟ್ಟಿ ಗ್ರಾಮದ ರೇಷ್ಮೆ ಫಾರ್ಮ್ ನಲ್ಲಿ ಬೇವಿನ ಗಿಡಕ್ಕೆ ನೇಣು ಹಾಕಿಕೊಂಡಿದ್ದಾರೆ.

ಮೃತನ ತಾಯಿ ರಾಮವ್ವ ನೀಡಿದ ದೂರಿನ್ವಯ ಲಿಂಗಸುಗೂರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇದನ್ನೂ ಓದಿ :ಕೋವಿಡ್ ಪಾಸಿಟಿವ್ ವರದಿಗೆ ಹೆದರಿ ನೀರು ತುಂಬಿದ ಕ್ವಾರಿಗೆ ಹಾರಿ ಮಹಿಳೆ ಆತ್ಮಹತ್ಯೆ

Advertisement
Advertisement

Udayavani is now on Telegram. Click here to join our channel and stay updated with the latest news.

Next