Advertisement

ಅಕ್ರಮ ಗಣಿಯಲ್ಲಿ ಭಾರಿ ಸ್ಫೋಟಕ್ಕೆ ಸಿದ್ಧತೆ : ಪೊಲೀಸ್ ದಾಳಿಯಿಂದ ತಪ್ಪಿದ ಅಪಾಯ

04:04 PM Jul 19, 2021 | Team Udayavani |

ವಿಜಯಪುರ : ಜಿಲ್ಲೆಯ ಅನಧಿಕೃತವಾಗಿ ನಡೆಯುತ್ತಿದ್ದ ಗಣಿಗಾರಿಕೆಯಲ್ಲಿ ಅಕ್ರಮವಾವಾಗಿ ಭಾರಿ ಪ್ರಮಾಣದ ಮದ್ದು ಬಳಸಿ ಸ್ಫೋಟಕ್ಕೆ ಸಿದ್ದತೆ ಮಾಡಿದ್ದನ್ನು ಖಚಿತ ಮಾಹಿತಿ ಆಧರಿಸಿ ಪೊಲೀಸರು ದಾಳಿ ನಡೆಸಿ ವಿಫಲಗೊಳಿಸಿದ ಘಟನೆ ವರದಿಯಾಗಿದೆ.

Advertisement

ಹೊರ್ತಿ ಪೊಲೀಸ್ ಠಾಣೆ ವ್ಯಾಪ್ತಿಯ ಸೊಣಕನಹಳ್ಳಿ ಪ್ರದೇಶದಲ್ಲಿ ಅಶೋಕ ಬಂಡಿ ಎಂಬ ವ್ಯಕ್ತಿ ಅನಧಿಕೃತವಾಗಿ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದ. ಅಲ್ಲದೇ ಗಣಿಯಲ್ಲಿ ಅಕ್ರಮವಾಗಿ 92 ಗುಂಡಿಗಳಲ್ಲಿ ಸಿಡಿಮದ್ದು ತುಂಬಿ, ಜಿಲಿಟಿನ್ ಕಡ್ಡಿಗಳನ್ನು ಇರಿಸಿ ಕಲ್ಲು ಸ್ಫೋಟಿಸಲು ಸಿದ್ಧತೆ ಮಾಡಿಕೊಂಡಿದ್ದ. ಖಚಿತ ಮಾಹಿತಿ ಮೇರೆಗೆ ಇಂಡಿ ಡಿಎಸ್ಪಿ ಶ್ರೀಧರ ದೊಡ್ಡಿ ಗಣಿಗಾರಿಕೆ ಮೇಲೆ ದಾಳಿ ನಡೆಸಿ, ಭಾರಿ ಪ್ರಮಾಣದಲ್ಲಿ ನಡೆಯಲಿದ್ದ ಅಕ್ರಮ ಸ್ಫೋಟವನ್ನು ತಡೆದಿದ್ದಾರೆ ಎಂದು ಎಸ್ಪಿ ಅನುಪಮ ಅಗರವಾಲ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಈ ಕುರಿತು ಘಟನೆ ವಿವರ ನೀಡಿರುವ ಡಿಎಸ್ಪಿ ಶ್ರೀಧರ ದೊಡ್ಡಿ,ಜಿಲ್ಲೆಯ ಹೊರ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೊಣಕನಹಳ್ಳಿ ಪ್ರದೇಶದ‌ ಅನಧಿಕೃತ ಗಣಿಗಾರಿಕೆ ಪ್ರದೇಶದಲ್ಲಿ ಅಕ್ರಮವಾಗಿ ಸ್ಫೋಟಕ್ಕೆ ನಡೆದಿದ್ದನ್ನು ವಿಫಲ ಗೊಳಿಸಲಾಗಿದೆ.

ಅಕ್ರಮವಾಗಿ ಸ್ಫೋಟಕ ಸರಬರಾಜು ಮಾಡಿದ ಸಿಂದಗಿ ಪಟ್ಟಣದ ಮಹೇಶ ಟ್ರೇಡರ್ಸ್ ಮ್ಯಾನೇಜರ್ ಲಕ್ಷ್ಮಣ, ಸ್ಪೋಟಕ್ಕೆ ಸಿದ್ಧತೆ ಮಾಡಿದ್ದ ಅಕ್ರಮ ಗಣಿ ಮಾಲೀಕ ಅಶೋಕ ಬಂಡಿ ಇವರನ್ನು ಬಂಧಿಸಲಾಗಿದೆ. ಇನ್ನೋರ್ವ ಆರೋಪಿಯ ಬಂಧನಕ್ಕೆ ಶೋಧ ಕಾರ್ಯ ನಡೆದಿದೆ ಎಂದು ವಿವರಿಸಿದರು.

Advertisement

ಇದೇ ವೇಳೆ ಸ್ಫೋಟಕ್ಕೆ ಸಿದ್ಧಗೊಂಡಿರುವ ಸ್ಫೋಟಕವನ್ನು ನಿಷ್ಕ್ರಿಯಗೊಳಿಸಲು ಬೆಂಗಳೂರಿನಿಂದ ಬಾಂಬ್ ನಿಷ್ಕಯ ದಳದ ತಜ್ಞರು ಸ್ಥಳಕ್ಕೆ ಆಗಮಿಸಲಿದ್ದು, ಆ ಬಳಿಕವೇ ಸ್ಫೋಟಕದ ಸಾಮರ್ಥ್ಯ, ಪ್ರಮಾಣ, ಅಪಾಯದ ಸಂಭಾವ್ಯತೆಯಂಥ ಅಂಶಗಳು ಹೊರ ಬರಲಿವೆ ಎಂದು ವಿವರಿಸಿದರು.

ಜಿಲ್ಲಾಧಿಕಾರಿ ಗಳಿಂದ ಅಧಿಕೃತ ಪರವಾನಿಗೆ ಪಡೆದಿರುವ ಗಣಿಗಳಲ್ಲಿ ಲೈಸೆನ್ಸ್ ಇರುವ ಸ್ಫೋಟಕ ಸರಬರಾಜುದಾರರಿಂದ ಮಾತ್ರ ಸಿಡಿಮದ್ದು ಖರೀಸಬೇಕು. ಅಲ್ಲದೇ ಪರವಾನಿಗೆ, ಲೈಸೆನ್ಸ್ ಇದ್ದರೂ ಏಕ‌ಕಾಲಕ್ಕೆ 5-10 ಕ್ಕಿಂತ ಹೆಚ್ಚಿನ ಸ್ಪೋಟ ಮಾಡುವಂತಿಲ್ಲ. ಹೀಗೆ ಪ್ರತಿ ಹಂತದಲ್ಲೂ ಸೊಣಕನಹಳ್ಳಿ‌ ಪ್ರದೇಶದ ಅಕ್ರಮ ಗಣಿಗಾರಿಕೆಯಲ್ಲಿ ಕಾನೂನು ಉಲ್ಲಂಘನೆ ಆಗಿದೆ ಎಂದು ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next