Advertisement

ಪೊಲೀಸ್‌ ದಾಳಿ: 240 ಕ್ವಿಂಟಲ್ ಅಕ್ಕಿ ವಶಕ್ಕೆ

04:21 PM Jul 07, 2019 | Team Udayavani |

ಕುಷ್ಟಗಿ: ತಮಿಳುನಾಡಿನಿಂದ ಮಹಾರಾಷ್ಟ್ರಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ 240 ಕ್ವಿಂಟಲ್ ಅಕ್ಕಿಯನ್ನು ಲಾರಿ ಸಮೇತವಾಗಿ ಸ್ಥಳೀಯ ಪೊಲೀಸರು ವಶಕ್ಕೆ ಪಡೆದಿದ್ದು, ಚಾಲಕರಿಬ್ಬರು ಹಾಗೂ ಮಹಿಳೆ ಸೇರಿದಂತೆ 8 ಜನರ ವಿರುದ್ಧ ದೂರು ದಾಖಲಾಗಿದೆ.

Advertisement

ಲಾರಿಯಲ್ಲಿ ಅಕ್ರಮವಾಗಿ ಅಕ್ಕಿ ಸಾಗಿಸುವ ಖಚಿತ ಮಾಹಿತಿ ಮೇರೆಗೆ ಕುಷ್ಟಗಿ ಪೊಲೀಸರು, ರಾಷ್ಟ್ರೀಯ ಹೆದ್ದಾರಿ-50 ಕುರಬನಾಳ ಕ್ರಾಸ್‌ ನಲ್ಲಿ ಲಾರಿ ವಶಕ್ಕೆ ತೆಗೆದುಕೊಂಡರು. ಲಾರಿ ಚಾಲಕರಾದ ತಮಿಳುನಾಡು ಸೇಲಂ ಜಿಲ್ಲೆಯ ಶೇಖರ್‌ ಆನಂದನ್‌, ಶಿವಕುಮಾರ ಮಾದಯ್ಯನ್‌ ವಶಕ್ಕೆ ತೆಗೆದುಕೊಂಡರು.

ಇಲ್ಲಿನ ಆಹಾರ ಇಲಾಖೆ ಶಿರಸ್ತೇದಾರ ರಾಜು ಫಿರಂಗಿ ಹಾಗೂ ಕೆಎಫ್‌ಎಸ್‌ಸಿ ಉಗ್ರಾಣ ವ್ಯವಸ್ಥಾಪಕ ಕಾಂತೇಶ ಅಳಲಗೇರಿ ಅವರು, ಪಡಿತರ ಕಾರ್ಡ್‌ಗೆ ವಿತರಿಸುವ ಅಕ್ಕಿ ಎಂದು ಖಾತ್ರಿ ಪಡಿಸಿದರು. ಲಾರಿಯಲ್ಲಿ 40ರಿಂದ 50 ಕೆಜಿಯ 500 ಅಕ್ಕಿಚೀಲಗಳಿದ್ದವು. ಅಂದಾಜು ಮೌಲ್ಯ 5.76 ಲಕ್ಷ ರೂ. ಅಂದಾಜಿಸಲಾಗಿದೆ. ಅಗತ್ಯ ವಸ್ತುಗಳ ಕಾಯ್ದೆ 1955 ಕಲಂ 3 ಮತ್ತು 7ರನ್ವಯ ಪ್ರಕರಣ ದಾಖಲಾಗಿದೆ. ಲಾರಿ ಚಾಲಕರಾದ ಶಿವಕುಮಾರ, ಶೇಖರ್‌ ಆನಂದನ್‌, ಮಹಾರಾಷ್ಟ್ರದ ಸೊಲ್ಲಾಪೂರ ಜಿಲ್ಲೆಯ ಬ್ರೋಕರ್‌ ರಾಮು ಕತ್ತಿ, ಬಳ್ಳಾರಿ ಕುಂಟ ಮಂಜು ಹಾಗೂ ಸುರೇಶಗೌಡ, ತಮಿಳುನಾಡು ಮೂಲದ ವೆನ್ನಿಲ್ಲಾ ಸೆಲ್ವರಾಜ್‌ ಹಾಗೂ ಸೊಲ್ಲಾಪೂರ ಮೂಲದ ಇನ್ನಿಬ್ಬರು ಸೇರಿದಂತೆ 8 ಜನರ ವಿರುದ್ಧ ಕುಷ್ಟಗಿ ಠಾಣೆಯಲ್ಲಿ ದೂರು ದಾಖಲಾಗಿದೆ. ಪಿಎಸ್‌ಐ ವಿಶ್ವನಾಥ ಹಿರೇಗೌಡ್ರು ತನಿಖೆ ಆರಂಭಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next