Advertisement

ರಾಜ್ಯಕ್ಕೆ ಉಗ್ರರು ನುಸುಳಿದ್ದಾರೆಂದು ಹುಸಿ ಕರೆ; ಮಾಜಿ ಸೈನಿಕ ಅರೆಸ್ಟ್‌!

08:58 AM Apr 28, 2019 | Vishnu Das |

ಬೆಂಗಳೂರು : 19 ಮಂದಿ ಉಗ್ರರು ನುಸುಳಿದ್ದಾರೆ ಎಂದು ಹುಸಿ ಕರೆ ಮಾಡಿದ ನಿವೃತ್ತ ಸೈನಿಕರೊಬ್ಬರನ್ನು ಪೊಲೀಸರು ಬಂಧಿಸಿದ ಘಟನೆ ಶನಿವಾರ ನಡೆದಿದೆ.

Advertisement

65 ರ ಹರೆಯದಸ್ವಾಮಿ ಸುಂದರ ಮೂರ್ತಿ ಬಂಧನಕ್ಕೊಳಗಾಗಿದ್ದು, ಲಾರಿ ಚಾಲಕನಾಗಿ ಕೆಲಸ ಮಾಡುತ್ತಿದ್ದರು.

ಉಗ್ರರು ನಸುಳಿರುವ ಕುರಿತು ಕರೆ ಮಾಡಿದ ಬೆನ್ನಲ್ಲೇ ಜಾಗೃತರಾದ ಕೋಲಾರ ಮತ್ತು ಬೆಂಗಳೂರು ಪೊಲೀಸರು ವಿಶೇಷ ತಂಡ ರಚಿಸಿ ಕಾರ್ಯಾಚರಣೆ ಗಿಳಿದಿದ್ದರು.

ಬೆಂಗಳೂರು ಹೊರವಲಯದ ಅವಲಹಳ್ಳಿ ಎಂಬಲ್ಲಿ ಸುಂದರ ಮೂರ್ತಿಯನ್ನು ಬಂಧಿಸಿದ್ದಾರೆ.

ಸಂದರಮೂರ್ತಿ ಮುನಿವೆಂಕಟಪ್ಪ ಲೇಔಟ್‌ನ ನಿವಾಸಿಯಾಗಿದ್ದು, ರಾಜ್‌ಗೊàಪಾಲ್‌ ಎನ್ನುವವರ ಮಗ. ಸಂದರ ಮೂರ್ತಿ ಅವರ ಮಗನೂ ಸೇನೆಯಲ್ಲಿ ಸೇವೆ ಸಲ್ಲಿಸಿದ್ದು ಕಾರ್ಗಿಲ್‌ ಯುದ್ಧದಲ್ಲಿ ಹುತಾತ್ಮರಾಗಿದ್ದರು.

Advertisement

ನಾನು ಶ್ರೀಲಂಕಾದಲ್ಲಿ ಭೀಕರ ಸ್ಫೋಟಗಳು ನಡೆದ ಬಳಿಕ ರಾಜ್ಯಕ್ಕೂ ಉಗ್ರರು ನುಸುಳಿರಬಹುದು ಎಂದು ಅಂದಾಜಿಸಿದೆ ಎಂದು ಬಂಧನದ ಬಳಿಕ ಸುಂದರಮೂರ್ತಿ ಪೊಲೀಸರ ಬಳಿ ಹೇಳಿಕೆ ನೀಡಿದ್ದಾರೆ.

ಸುಂದರಮೂರ್ತಿ ಅವರು 19 ಉಗ್ರರು ತಮಿಳುನಾಡಿನ ರಾಮಾನಾಥಪುರಂನಲ್ಲಿ ಅಡಗಿದ್ದಾರೆ ಎಂದು ಕರೆ ಮಾಡಿದ್ದರು. ಕರೆ ಬಂದ ಬಳಿಕ ಡಿಜಿ-ಐಜಿಪಿ ಅವರು ಎಲ್ಲಾ ಕಡೆಗಳಿಗೆ ಕರೆ ಮಾಡಿ ಭದ್ರತಾ ಕ್ರಮಗಳನ್ನು ಕೈಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next