Advertisement

ಪಿಒಕೆ ನಿವಾಸಿಗೆ ಸಿಕ್ಕಿತು ಭಾರತಕ್ಕೆ ಬರುವ ವೀಸಾ

03:45 AM Jul 19, 2017 | Team Udayavani |

ಹೊಸದಿಲ್ಲಿ: ಪಾಕ್‌ ಆಕ್ರಮಿತ ಕಾಶ್ಮೀರದ ನಿವಾಸಿಯೊಬ್ಬರಿಗೆ ಭಾರತದಲ್ಲಿ ಚಿಕಿತ್ಸೆ ಪಡೆಯಲು ಬೇಕಾಗಿರುವ ವೀಸಾಕ್ಕೆ ಅನುಮತಿ ಪತ್ರವನ್ನು ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ನೀಡಿದ್ದಾರೆ. ಈ ಬಗ್ಗೆ ಪಾಕಿಸ್ಥಾನ ವಿದೇಶಾಂಗ ವ್ಯವಹಾರಗಳ ಸಲಹೆಗಾರ ಸರ್ತಾಜ್‌ ಅಜೀಜ್‌ರ ಪತ್ರ ಬೇಕಾಗಿಲ್ಲ ಎಂದು ಅವರು ಹೇಳಿದ್ದಾರೆ. ರಾವಲ್‌ಕೋಟ್‌ನ ಒಸಾಮ ಅಲಿ (24)ಗೆ ಟ್ಯೂಮರ್‌ ಇರುವ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ದೆಹಲಿಗೆ ಬರಬೇಕಾಗಿದ್ದುದರಿಂದ ಅವರು ಕೇಂದ್ರದ ನೆರವು ಯಾಚಿಸಿದ್ದರು. ಪಿಒಕೆ ಭಾರತದ ಭಾಗ. ಅಲ್ಲಿಂದ ಭಾರತಕ್ಕೆ ಬರಲು ಯಾರ ಅನುಮತಿಯೂ ಬೇಕಾಗಿಲ್ಲ ಎಂದಿದ್ದಾರೆ ಸುಷ್ಮಾ.

Advertisement
Advertisement

Udayavani is now on Telegram. Click here to join our channel and stay updated with the latest news.

Next