Advertisement
ಮಂಗಳವಾರ ಪ್ರತಿಭಟನಕಾರರ ಮೇಲೆ ಪಾಕ್ ಸೇನೆ ಗೋಲಿಬಾರ್ ನಡೆಸಿದ್ದು, ಮೂವರು ಮೃತ ಪಟ್ಟು, 6 ಮಂದಿ ಗಾಯಗೊಂಡಿದ್ದಾರೆ. ಸಂಘರ್ಷ ದಲ್ಲಿ ಮೃತರ ಸಂಖ್ಯೆ 4ಕ್ಕೆ ಏರಿದೆ.
Related Articles
Advertisement
ಬೆಲೆ ಇಳಿಕೆ ಮಾಡಿದ ಸರಕಾರಪ್ರತಿಭಟನೆಯ ಹಿನ್ನೆಲೆಯಲ್ಲಿ ಪಾಕ್ ಸರಕಾರವು 40 ಕೆ.ಜಿ. ಗೋಧಿ ಹಿಟ್ಟಿನ ಬೆಲೆಯನ್ನು 3,100 ಪಾಕಿಸ್ಥಾನಿ ರೂ.ಗಳಿಂದ 2,000 ರೂ.ಗೆ ಇಳಿಕೆ ಮಾಡಿದೆ. ಅದೇ ರೀತಿ, 100, 200 ಮತ್ತು 300ಕ್ಕಿಂತ ಅಧಿಕ ಯುನಿಟ್ ವಿದ್ಯುತ್ ಬಳಕೆಗೆ ಕ್ರಮವಾಗಿ ಪ್ರತೀ ಯುನಿಟ್ಗೆ 3 ರೂ., 5 ರೂ., 6 ರೂ. ಇಳಿಕೆ ಮಾಡಿದೆ. ಸೋಮವಾರ ಕೂಡ ಪಿಒಕೆಗಾಗಿ ಪ್ರಧಾನಿ ಶಹಬಾಜ್ ಷರೀಫ್ 2,300 ಕೋಟಿ ರೂ. ಪರಿಹಾರ ಘೋಷಣೆ ಮಾಡಿದ್ದರು. ಪ್ರತಿಭಟನೆ ವಾಪಸ್?
ಬೆಲೆ ಇಳಿಕೆ ಪ್ರಕಟಿಸುತ್ತಿದ್ದಂತೆ ಪ್ರತಿಭಟನೆಯನ್ನು ವಾಪಸ್ ಪಡೆಯುವ ಕುರಿತು ನಿರ್ಧರಿಸಲಾಗುವುದು ಎಂದು ಜಮ್ಮು -ಕಾಶ್ಮೀರ ಜಂಟಿ ಅವಾಮಿ ಕ್ರಿಯಾ ಸಮಿತಿ (ಜೆಎಎಸಿ) ಮುಖ್ಯಸ್ಥ ಶೌಕತ್ ನವಾಜ್ ಮಿರ್ ಸೋಮವಾರ ಹೇಳಿದ್ದರು. ಪಿಒಕೆ ಬೇಡಿಕೆ ಕುರಿತಾದ ಸರಕಾರದ ಅಧಿಸೂಚನೆ ಮಂಗಳವಾರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಕೂಡ ಆಯಿತು. ಅಲ್ಲದೆ ಪ್ರತಿಭಟನಕಾರರ ಎಲ್ಲ ಬೇಡಿಕೆಗಳನ್ನು ಈಡೇರಿಸಲು ಸರಕಾರ ಒಪ್ಪಿಕೊಂಡಿದ್ದರಿಂದ ಪ್ರತಿಭಟನೆಯನ್ನು ಕೈಬಿಡಲಾಗಿದೆ ಎಂದು ಅವರು ತಿಳಿಸಿದರು. ವಿಶ್ವಸಂಸ್ಥೆಯಲ್ಲಿ ದನಿ ಎತ್ತಲು
ಕಾಶ್ಮೀರ ಬಿಜೆಪಿ ಘಟಕ ಆಗ್ರಹ
ಜಮ್ಮು: ಪಿಒಕೆಯಲ್ಲಿ ಪಾಕಿಸ್ಥಾನಿ ಸೇನೆ ನಡೆಸುತ್ತಿರುವ ದೌರ್ಜನ್ಯದ ಕುರಿತು ವಿಶ್ವ ಸಂಸ್ಥೆಯಲ್ಲಿ ಕೇಂದ್ರ ಸರಕಾರವು ದನಿ ಎತ್ತಬೇಕು ಎಂದು ಜಮ್ಮು -ಕಾಶ್ಮೀರದ ಬಿಜೆಪಿ ಘಟಕದ ಅಧ್ಯಕ್ಷ ರವಿಂದೇರ್ ರೈನಾ ಆಗ್ರಹಿಸಿದ್ದಾರೆ. ಜತೆಗೆ ಪಿಒಕೆ ಜನರಿಗೆ ಕೇಂದ್ರ ಸರಕಾರವು ರೇಷನ್ ಕಳುಹಿಸಿಕೊಡಬೇಕು ಎಂದಿದ್ದಾರೆ. ರಜೌರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಪಿಒಕೆಯ ಜನರೊಂದಿಗೆ ಇದ್ದೇವೆ. ನಮ್ಮ ಸಹೋದರ-ಸಹೋದರಿಯರಾಗಿರುವ ಪಿಒಕೆ ಮಂದಿ ನಮ್ಮ ನಾಗರಿಕರು ಎಂದಿದ್ದಾರೆ.