Advertisement

ಸಾಹಿತ್ಯ ಸಿಂಚನ ಶ್ರೀ ಪ್ರಶಸ್ತಿ ಗೆ ಕವಿ ರಾಜೀವ ಅಜ್ಜೀಬಳ ಆಯ್ಕೆ

07:17 PM Oct 19, 2021 | Team Udayavani |

ಶಿರಸಿ: ಸಾಹಿತ್ಯ ಸಿಂಚನ ಶ್ರೀ ಪ್ರಶಸ್ತಿಗೆ ಹಿರಿಯ ಕವಿ ಹಾಗೂ ಹಿರಿಯ ಸಾಹಿತಿ ರಾಜೀವ ಅಜ್ಜಿಬಳ ಆಯ್ಕೆ ಆಗಿದ್ದಾರೆ.

Advertisement

ಇಲ್ಲಿನ ಸಾಹಿತ್ಯ ಸಿಂಚನ ಬಳಗ ಸಾಹಿತ್ಯ ಸಿಂಚನ ಶ್ರೀ ಪ್ರಶಸ್ತಿ ನೀಡಲು ತೀರ್ಮಾನಿಸಿದ್ದು, ಮೊದಲ ವರ್ಷದ ಪ್ರಶಸ್ತಿಗೆ  ರಾಜೀವ ಅಜ್ಜಿಬಳ ಅವರು ಆಯ್ಕೆಯಾಗಿದ್ದಾರೆ.

ನಗರದ ಎಪಿಎಂಸಿ ಯಾರ್ಡ್ ನಲ್ಲಿರುವ ರೈತಭವನದಲ್ಲಿ ಅ. 23 ರಂದು ಮಧ್ಯಾಹ್ನ 3 ಗಂಟೆಗೆ ಸಾಹಿತ್ಯ ಸಿಂಚನ ಬಳಗ ಇವರು ಹಮ್ಮಿಕೊಂಡಿರುವ ದಸರಾ ಕವಿ ಮಿಲನ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.

ಕಾರ್ಯಕ್ರಮವನ್ನು ಟಿಂ ಪರಿವರ್ತ‌ನೆ ಸಂಸ್ಥಾಪಕ ಹಿತೇಂದ್ರ ನಾಯ್ಕ್ ಉದ್ಘಾಟಿಸಲಿದ್ದಾರೆ. ಪತ್ರಕರ್ತ ಸುಬ್ರಾಯ ಭಟ್ ಬಕ್ಕಳ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಯಾಗಿ ಮೋಹನ ಭರಣಿ ಭಾಗವಹಿಸಲಿದ್ದಾರೆ ಎಂದು ಸಾಹಿತ್ಯ ಸಿಂಚನ ಬಳಗದ ಅಧ್ಯಕ್ಷ ಶಿವಪ್ರಸಾದ ಹಿರೇಕೈ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next