Advertisement

ಜನರು ಮೂರ್ಖರೆಂದು ತಿಳಿಯಬೇಡಿ: ಪ್ರಧಾನಿ ಮೋದಿಗೆ ಪ್ರಿಯಾಂಕಾ

06:51 AM Mar 20, 2019 | udayavani editorial |

ಮಿರ್ಜಾಪುರ : ”ಜನರು ಮೂರ್ಖರು ಎಂದು ಭಾವಿಸುವುದನ್ನು ಪ್ರಧಾನಿ ನರೇಂದ್ರ ಮೋದಿ ಇನ್ನಾದರೂ ನಿಲ್ಲಿಸಬೇಕು; ಏಕೆಂದರೆ ಜನರು ಮೂರ್ಖರಲ್ಲ, ಅವರು ಎಲ್ಲವನ್ನೂ ನೋಡುವ ಸಾಮರ್ಥ್ಯ ಉಳ್ಳವರಾಗಿದ್ದಾರೆ” ಎಂದು ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ. 

Advertisement

ಉತ್ತರ ಪ್ರದೇಶದಲ್ಲಿ ಲೋಕಸಭೆ ಚುನಾವಣೆ ಪ್ರಚಾರಾರ್ಥವಾಗಿ 3 ದಿನಗಳ ಬೋರ್ಟ್‌ ಜರ್ನಿ ಯಲ್ಲಿ ತೊಡಗಿಕೊಂಡು ತನ್ನ ಪ್ರಯಾಣದ ಉದ್ದಕ್ಕೂ ನದೀ ದಡದ ಜನರನ್ನು ತಲುಪುತ್ತಾ ಅವರ ಸುಖ ದುಃಖಗಳನ್ನು ಆಲಿಸುತ್ತಿರುವ ಪ್ರಿಯಾಂಕಾ ಗಾಂಧಿ ಅವರು “ಪ್ರಧಾನಿ ಮೋದಿ ಜನರನ್ನು ಮೂರ್ಖರೆಂದು ತಿಳಿಯಬಾರದು’ ಎಂದು ಹೇಳಿದರು. 

ಪ್ರಧಾನಿ ಮೋದಿ ಅವರು ಕಳೆದ ಐದು ವರ್ಷಗಳ ತಮ್ಮ ಆಡಳಿತೆಯಲ್ಲಿ ಪ್ರಜಾಸತ್ತೆಯ ಪ್ರತಿಯೊಂದು ಅಂಗದ ಮೇಲೆ ದಾಳಿ ನಡೆಸುತ್ತಾ ಬಂದಿದ್ದಾರೆ ಎಂದು ಪ್ರಿಯಾಂಕಾ ಆರೋಪಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next