Advertisement

ಮೋದಿ ಮನ್‌ ಕೀ ಬಾತ್‌: ಮೈಸೂರು ಯುವಕನ ಕಾರ್ಯಕ್ಕೆ ಪ್ರಧಾನಿ ಶ್ಲಾಘನೆ 

12:22 PM Feb 26, 2017 | |

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಜನಪ್ರಿಯ ರೇಡಿಯೋ ಕಾರ್ಯಕ್ರಮ ಮನ್‌ಕೀ ಬಾತ್‌ನಲ್ಲಿ ದೇಶವಾಸಿಗಳನ್ನುದ್ದೇಶಿಸಿ ಮಾತನಾಡಿದರು. 

Advertisement

ಏಕಕಾಲಕ್ಕೆ  104 ಉಪಗ್ರಹಗಳ ಉಡ್ಡಯನ ಮಾಡಿ ದ್ದಕ್ಕಾಗಿ ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಿದರು. ಜನತೆಗೆ ಹೋಳಿ ಹಬ್ಬದ ಶುಭಾಶಯ ಕೋರಿದರು.

ಮೈಸೂರು ಯುವಕನ ಕಾರ್ಯಕ್ಕೆ ಶ್ಲಾಘನೆ 

ಮೈಸೂರು ಯುವಕ ಸಂತೋಷ್‌ ಅವರ ಹೆಸರನ್ನು ಮಾತಿನಲ್ಲಿ ಉಲ್ಲೇಖೀಸಿದ ಮೋದಿ ಸಮಾಜಮುಖೀ ಕಾರ್ಯಕ್ಕಾಗಿ ಶ್ಲಾಘನೆ ವ್ಯಕ್ತ ಪಡಿಸಿದರು. ಸಂತೋಷ್‌ ಮಾಡಿರುವ ಕಾರ್ಯ ಯುವಕರಿಗೆ ಮಾದರಿಯಾಗಲಿ ಎಂದರು. 

ಸಂತೋಷ್‌ ಲಕ್ಕಿಡೀಪ್‌ನಲ್ಲಿ ಬಂದಿದ್ದ ಹಣವನ್ನು ಅಗ್ನಿ ಅನಾಹುತದಿಂದ ಮನೆ ಕಳೆದುಕೊಂಡಿದ್ದ ವೃದ್ಧೆಗೆ ನೀಡಿದ್ದರು. ಈ ವಿಚಾರವನ್ನು ಮೋದಿ ಆ್ಯಪ್‌ನಲ್ಲಿ ಬರೆದಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next