Advertisement

ದೀಪಾವಳಿಗೂ ಮುನ್ನ ವಾರಣಾಸಿ ಕ್ಷೇತ್ರಕ್ಕೆ 614 ಕೋಟಿ ರೂ. ಯೋಜನೆಗಳ ಕೊಡುಗೆ ಕೊಟ್ಟ ಪ್ರಧಾನಿ

02:23 PM Nov 09, 2020 | Nagendra Trasi |

ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಲೋಕಸಭಾ ಕ್ಷೇತ್ರವಾದ ವಾರಣಾಸಿಯಲ್ಲಿ ಸೋಮವಾರ (ನವೆಂಬರ್ 9, 2020), ಕೃಷಿ, ಪ್ರವಾಸೋದ್ಯಮ ಮತ್ತು ಮೂಲಭೂತ ಸೌಕರ್ಯಗಳ ವಿವಿಧ ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನಾ ಕಾರ್ಯ ನೆರವೇರಿಸಿದರು.

Advertisement

ದೀಪಾವಳಿ ಹಬ್ಬಕ್ಕೆ ವಾರಣಾಸಿ ಕ್ಷೇತ್ರಕ್ಕೆ ಕೊಡುಗೆ ಎಂಬಂತೆ ಸುಮಾರು 614 ಕೋಟಿ ರೂಪಾಯಿಗಳ ವೆಚ್ಚದ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿರುವುದಾಗಿ ಪ್ರಧಾನಿ ಕಚೇರಿ ಮೂಲಗಳು ತಿಳಿಸಿವೆ.

ಈ ಯೋಜನೆಯಿಂದ ಅನುಕೂಲವಾಗಲಿರುವ ಕೆಲವು ವ್ಯಕ್ತಿಗಳ ಜತೆ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತುಕತೆ ನಡೆಸಿದರು. ಈ ವೇಳೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡಾ ಹಾಜರಿದ್ದರು.

ಪ್ರಧಾನಿ ಮೋದಿ ಅವರ ಉದ್ಘಾಟನಾ ಯೋಜನೆಗಳಲ್ಲಿ ರಾಮ್ ನಗರ್ ಲಾಲ್ ಬಹದ್ದೂರ್ ಶಾಸ್ತ್ರಿ ಆಸ್ಪತ್ರೆ ಮೇಲ್ದರ್ಜೆಗೆ, ಚರಂಡಿ ಸಂಬಂಧಿ ಕೆಲಸ, ಹಸುಗಳ ಸಂಗೋಪನೆ ಮತ್ತು ರಕ್ಷಣೆ ಸಂಬಂಧಿ ಮೂಲಭೂತ ಸೌಕರ್ಯ, ಬಹುಪಯೋಗಿ ಬೀಜಸಂರಕ್ಷಣಾ ಕೇಂದ್ರ, ಸಾರನಾಥ್ ಬೆಳಕು ಮತ್ತು ಧ್ವನಿ ಪ್ರದರ್ಶನ ಯೋಜನೆ ಸೇರಿರುವುದಾಗಿ ವರದಿ ತಿಳಿಸಿದೆ.

ದಶಾವಮೇಧ್ ಘಾಟ್ ಮರು ಅಭಿವೃದ್ಧಿ ಯೋಜನೆ, ಖಿಡ್ಕಿಯಾ ಘಾಟ್, ಗಿರಿಜಾ ದೇವಿ ಸಾಂಸ್ಕೃತಿಕ್ ಸಂಕುಲ್ ಬಹುಪಯೋಗಿ ಹಾಲ್, ನಗರದ ರಸ್ತೆಗಳ ದುರಸ್ತಿ ಕಾರ್ಯದ ಯೋಜನೆಗೆ ಪ್ರಧಾನಿ ಶಂಕುಸ್ಥಾಪನೆ ನೆರವೇರಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next