Advertisement

ಕ್ಷಯ ರೋಗಿಯ ದತ್ತು: ಕೇಂದ್ರದ ಹೊಸ ಯೋಜನೆ; ನಿಕ್ಷಯ ಮಿತ್ರರಿಗೆ ಜವಾಬ್ದಾರಿ

08:38 PM Aug 10, 2022 | Team Udayavani |

ನವದೆಹಲಿ: ದೇಶವನ್ನು ಕ್ಷಯರೋಗ ಮುಕ್ತ ಮಾಡಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕೆಲಸ ಮಾಡುತ್ತಿದ್ದು, ಅದಕ್ಕಾಗಿಯೇ ಪ್ರಧಾನ ಮಂತ್ರಿ ಟಿಬಿ ಮುಕ್ತ ಭಾರತ ಅಭಿಯಾನ (ಪಿಎಂಟಿಬಿಎಂಬಿ) ಆರಂಭಿಸಲು ಸಜ್ಜಾಗಿದೆ.

Advertisement

ಈ ಯೋಜನೆಯ ಮೂಲಕ ಎನ್‌ಜಿಒಗಳು, ರಾಜಕಾರಣಿಗಳು, ಖಾಸಗಿ ಕಂಪನಿಗಳು ಅಥವಾ ವೈಯಕ್ತಿಕ ವ್ಯಕ್ತಿಗಳು ಕ್ಷಯ ರೋಗ ನಿಯಂತ್ರಣಕ್ಕೆ ಕೈ ಜೋಡಿಸಬಹುದಾಗಿದೆ.

ಈ ರೀತಿ ರೋಗ ನಿಯಂತ್ರಣಕ್ಕೆ ಮುಂದೆ ಬರುವವರನ್ನು “ನಿಕ್ಷಯ ಮಿತ್ರ’ ಎಂದು ಕರೆಯಲಾಗುವುದು. ಅವರು ದೇಶದ ಯಾವುದಾದರೂ ಕ್ಷಯ ರೋಗಿಯನ್ನು ದತ್ತು ರೂಪದಲ್ಲಿ ಪಡೆಯಬಹುದು. ದತ್ತು ಪಡೆದ ನಂತರ ಆ ರೋಗಿಗೆ ಸೂಕ್ತ ಪೌಷ್ಠಿಕ ಆಹಾರದ ವ್ಯವಸ್ಥೆ ಮಾಡಿಕೊಡುವುದು ಆ ನಿಕ್ಷಯ ಮಿತ್ರರ ಜವಾಬ್ದಾರಿಯಾಗಿರಲಿದೆ.

2025ರೊಳಗೆ ದೇಶವನ್ನು ಕ್ಷಯ ರೋಗ ಮುಕ್ತವನ್ನಾಗಿಸುವುದಾಗಿ ಪ್ರಧಾನಿ ಮೋದಿ ಅವರು 2018ರಲ್ಲಿಯೇ ಘೋಷಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next