Advertisement
ಪ್ರಧಾನಿ ಮೋದಿ ಅವರು ಭುಜ್ನಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಮಾಡಿ ಮಾತನಾಡಿದರು.
Related Articles
Advertisement
ಇಂತಹ ಪರಿಸ್ಥಿತಿಯಲ್ಲೂ ಒಂದೆಡೆ ಗುಜರಾತ್ ”ವಿಪತ್ತು ನಿರ್ವಹಣಾ ಕಾಯ್ದೆ”ಯನ್ನು ಜಾರಿಗೆ ತಂದ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.ಈ ಕಾಯಿದೆಯ ಪ್ರೇರಣೆಯಿಂದ ಇಡೀ ದೇಶಕ್ಕೆ ಇದೇ ಕಾನೂನನ್ನು ರೂಪಿಸಲಾಯಿತು ಎಂದರು.
2001ರಲ್ಲಿ ಸಂಪೂರ್ಣ ನಾಶವಾದ ಕಚ್ನಲ್ಲಿ ಆಗಿರುವ ಕೆಲಸ ಊಹೆಗೂ ನಿಲುಕದ್ದು.ಕ್ರಾಂತಿಗುರು ಶ್ಯಾಮ್ಜಿ ಕೃಷ್ಣವರ್ಮ ವಿಶ್ವವಿದ್ಯಾನಿಲಯವನ್ನು 2003 ರಲ್ಲಿ ಕಚ್ನಲ್ಲಿ ರಚಿಸಲಾಯಿತು, ಆದರೆ 35 ಕ್ಕೂ ಹೆಚ್ಚು ಹೊಸ ಕಾಲೇಜುಗಳನ್ನು ಸಹ ಸ್ಥಾಪಿಸಲಾಗಿದೆ ಎಂದರು.
ಆ ಕಷ್ಟದ ದಿನಗಳಲ್ಲಿ ‘ವಿಪತ್ತನ್ನು ಅವಕಾಶವನ್ನಾಗಿ ಮಾಡಿಕೊಳ್ಳುತ್ತೇವೆ’ ಎಂದು ಆತ್ಮವಿಶ್ವಾಸದಿಂದ ಹೇಳಿದ್ದೆ.ಇಂದು ನಾನು ಹೇಳುತ್ತೇನೆ, 2047 ರ ವೇಳೆಗೆ ಭಾರತವು ‘ಅಭಿವೃದ್ಧಿ ಹೊಂದಿದ ದೇಶ’ ಆಗಲಿದೆ ಎಂದರು.
2001 ರಲ್ಲಿ ಕಚ್ ಜಿಲ್ಲೆಯ ಭುಜ್ ನಲ್ಲಿ ಭಾರತದ 52 ನೇ ಗಣರಾಜ್ಯೋತ್ಸವದ ಜನವರಿ 26 ರಂದು ಬೆಳಗ್ಗೆ 7.7 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿತ್ತು. ದುರಂತದಲ್ಲಿ 20 ಸಾವಿರಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದರು ಮತ್ತು ಲಕ್ಷಾಂತರ ಜನರು ಗಾಯಗೊಂಡಿದ್ದರು. ಸುಮಾರು 3,40,000 ಕಟ್ಟಡಗಳು ನಾಶಗೊಂಡಿದ್ದವು.