ಈ ಬಗ್ಗೆ ಟ್ವಿಟರ್ನಲ್ಲಿ ಟ್ವೀಟ್ ಮಾಡಿರುವ ರಾಹುಲ್, ಸಿಬಿಐನಲ್ಲಿರುವ ಗುಜರಾತ್ ಕೇಡರ್ನ ಎ. ಕೆ. ಶರ್ಮಾ ಈ ಕೃತ್ಯ ಎಸಗಿದ್ದು, ಪಿಎನ್ಬಿ ಹ ಗರಣದ ಪ್ರಮುಖ ಆರೋಪಿಗಳಾದ ನೀರವ್ ಮೋದಿ ಹಾಗೂ ಮೆಹುಲ್ ಚೋಕ್ಸಿ ದೇಶ ತೊರೆಯಲೂ ಇವರು ಸಹಾಯ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಮಧ್ಯೆ ಆರೋಪಕ್ಕೆ ಸಿಬಿಐ ಪ್ರತಿಕ್ರಿಯೆ ನೀಡಿದ್ದು, ಮಲ್ಯ ಬಂಧಿಸಲು ಸಾಕಷ್ಟು ಸಾಕ್ಷ್ಯಗಳು ಇಲ್ಲದ ಕಾರಣ ಲುಕ್ ಔಟ್ ನೋಟಿಸ್ ಬದಲಿಸಲಾಗಿದೆ. ಇದಕ್ಕೆ ಕಾನೂನು ನಿಯಮಗಳನ್ನು ಪಾಲಿಸ ಲಾಗಿದ್ದು, ಇದು ಯಾವುದೇ ನಿರ್ದಿಷ್ಟ ಅಧಿಕಾರಿಯ ನಿರ್ಧಾರವಲ್ಲ ಎಂದಿದೆ.
Advertisement