Advertisement

ಮಲ್ಯ ಪರಾರಿಗೆ ಮೋದಿ ಆಪ್ತರ ನೆರವು

10:19 AM Sep 16, 2018 | Team Udayavani |

ಹೊಸದಿಲ್ಲಿ: ಉದ್ಯಮಿ ವಿಜಯ್‌ ಮಲ್ಯ ದೇಶ ತೊರೆಯಲು ಅನುವಾಗುವಂತೆ ಲುಕ್‌ಔಟ್‌ ನೋಟಿಸ್‌ನ ತೀವ್ರತೆಯನ್ನು ಬದಲಿಸಿದ್ದು ಪ್ರಧಾನಿ ನರೇಂದ್ರ ಮೋದಿಯ ಆಪ್ತ ಸಿಬಿಐ ಅಧಿಕಾರಿ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಆರೋಪಿಸಿದ್ದಾರೆ.
ಈ ಬಗ್ಗೆ ಟ್ವಿಟರ್‌ನಲ್ಲಿ ಟ್ವೀಟ್‌ ಮಾಡಿರುವ ರಾಹುಲ್‌, ಸಿಬಿಐನಲ್ಲಿರುವ ಗುಜರಾತ್‌ ಕೇಡರ್‌ನ ಎ. ಕೆ. ಶರ್ಮಾ ಈ ಕೃತ್ಯ ಎಸಗಿದ್ದು, ಪಿಎನ್‌ಬಿ ಹ ಗರಣದ ಪ್ರಮುಖ ಆರೋಪಿಗಳಾದ ನೀರವ್‌ ಮೋದಿ ಹಾಗೂ ಮೆಹುಲ್‌ ಚೋಕ್ಸಿ  ದೇಶ ತೊರೆಯಲೂ ಇವರು ಸಹಾಯ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಮಧ್ಯೆ ಆರೋಪಕ್ಕೆ ಸಿಬಿಐ ಪ್ರತಿಕ್ರಿಯೆ ನೀಡಿದ್ದು, ಮಲ್ಯ ಬಂಧಿಸಲು ಸಾಕಷ್ಟು ಸಾಕ್ಷ್ಯಗಳು ಇಲ್ಲದ ಕಾರಣ ಲುಕ್‌ ಔಟ್‌ ನೋಟಿಸ್‌ ಬದಲಿಸಲಾಗಿದೆ. ಇದಕ್ಕೆ ಕಾನೂನು ನಿಯಮಗಳನ್ನು ಪಾಲಿಸ ಲಾಗಿದ್ದು, ಇದು ಯಾವುದೇ ನಿರ್ದಿಷ್ಟ ಅಧಿಕಾರಿಯ ನಿರ್ಧಾರವಲ್ಲ ಎಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next