Advertisement

ಚೆನ್ನೈ-ಕೊಯಮತ್ತೂರು ನಡುವಿನ ವಂದೇ ಭಾರತ್‌ ರೈಲಿಗೆ ಹಸಿರು ನಿಶಾನೆ ತೋರಿದ PM ಮೋದಿ

06:00 PM Apr 08, 2023 | Team Udayavani |

ಚೆನ್ನೈ: ಚೆನ್ನೈ-ಕೊಯಮತ್ತೂರು ಮಧ್ಯೆ ಸಂಪರ್ಕ ಕಲ್ಪಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಶನಿವಾರ ವಂದೇ ಭಾರತ್‌ ರೈಲಿಗೆ ಚಾಲನೆ ನೀಡಿದ್ಧಾರೆ.

Advertisement

ಚೆನ್ನೈ ಸೆಂಟ್ರಲ್‌ ಡಾ.MGR ರೈಲ್ವೇ ನಿಲ್ದಾಣದಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ  ವಂದೇ ಭಾರತ್‌ ರೈಲಿಗೆ ಹಸಿರು ನಿಶಾನೆ ತೋರಿಸಿದ್ದಾರೆ.

ಆ ಬಳಿಕ ರೈಲಿನಲ್ಲಿ ಪ್ರಧಾನಿ ಮೋದಿ ವಿದ್ಯಾರ್ಥಿಗಳೊಂದಿಗೆ ಸಂವಾದವನ್ನೂ ನಡೆಸಿದ್ದಾರೆ.

ತಮಿಳುನಾಡಿನ ಪ್ರಮುಖ ಎರಡು ನಗರಗಳ ಮಧ್ಯೆ ವಂದೇ ಭಾರತ್‌ ಓಡುವುದರಿಂದ ಚೆನ್ನೈ-ಕೊಯಮತ್ತೂರು ನಡುವಿನ ಪ್ರಯಾಣ ಅವಧಿಯೂ ಕಡಿಮೆಯಾಗಲಿದೆ ಎಂದು ಹೇಳಲಾಗಿದೆ. ಈ ರೈಲು ಚೆನ್ನೈನಿಂದ ಕೊಯಮತ್ತೂರು ತಲುಪಲು 5 ಗಂಟೆ 50 ನಿಮಿಷ ತೆಗೆದುಕೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 

Advertisement

ವಂದೇ ಭಾರತ್‌ ರೈಲು ʻಕವಚʼ ಎಂಬ ರೈಲು ಡಿಕ್ಕಿ ತಪ್ಪಿಸುವ ವ್ಯವಸ್ಥೆ ಹೊಂದಿರಲಿದ್ದು, ಎಲ್ಲ ಬೋಗಿಗಳು ಸಿಸಿಟಿವಿ, ಆಟೋಮ್ಯಾಟಿಕ್‌ ಸ್ಲೈಡಿಂಗ್‌ ಬಾಗಿಲುಗಳು, ಬ್ರೈಲ್‌ ಲಿಪಿಯಲ್ಲೂ ಸೀಟು ಸಂಖ್ಯೆ, ದಿವ್ಯಾಂಗರಿಗೆ ಅನುಕೂಲವಾಗುವ ಶೌಚಾಲಯ ವ್ಯವಸ್ಥೆ, ಎಲ್‌ಇಡಿ ಲೈಟ್‌ಗಳು, 360 ಡಿಗ್ರಿ ತಿರುಗುವ ಆಸನ ವ್ಯವಸ್ಥೆ ಸೇರಿ ಅತ್ಯಾಧುನಿಕ ವ್ಯವಸ್ಥೆಯನ್ನೂ, ಉತ್ತಮ ಸುರಕ್ಷತಾ ವ್ಯವಸ್ಥೆಯನ್ನೂ ಹೊಂದಿದೆ.

ಇದನ್ನೂ ಓದಿಕೊಳಕು ಬಟ್ಟೆ ಧರಿಸುವ ಹುಡುಗಿಯರು….: ವಿವಾದಾತ್ಮಕ ಹೇಳಿಕೆ ನೀಡಿದ ಬಿಜೆಪಿ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next