Advertisement

ಬ್ರಿಟನ್‌ ರಾಣಿ 2ನೇ ಎಲಿಜಬೆತ್‌ ಸಾವಿಗೆ ಸಂತಾಪ ಸೂಚಿಸಿದ ಪ್ರಧಾನಿ 

11:12 PM Sep 10, 2022 | Team Udayavani |

ಹೊಸದಿಲ್ಲಿ: ಭಾರತ ಮತ್ತು ಯುನೈಟೆಡ್‌ ಕಿಂಗ್‌ಡಮ್‌ ನಡುವೆ ಉತ್ತಮ ಬಾಂಧವ್ಯ ಹೊಂದಿರುವುದು ಅಗತ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಯು.ಕೆ. ಪ್ರಧಾನಿ ಲಿಜ್‌ ಟ್ರಸ್‌ ಪ್ರತಿಪಾದಿಸಿದ್ದಾರೆ.

Advertisement

ಶನಿವಾರ ಇಬ್ಬರು ಪ್ರಧಾನಿಗಳ ನಡುವೆ ನಡೆದ ಮೊದಲ ಅಧಿಕೃತ ದೂರವಾಣಿ ಸಂಭಾಷಣೆಯಲ್ಲಿ ಈ ಅಂಶ ವ್ಯಕ್ತವಾಗಿದೆ. ಶೀಘ್ರವಾಗಿ ಇಬ್ಬರು ಮುಖಂಡರು ಖುದ್ದಾಗಿ ಭೇಟಿಯಾಗಿ ಮಾತುಕತೆ ನಡೆಸುವ ಇರಾದೆಯನ್ನೂ ವ್ಯಕ್ತಪಡಿಸಿದ್ದಾರೆ.

ಇದೇ ಸಂದರ್ಭದಲ್ಲಿ ಬ್ರಿಟನ್‌ ರಾಣಿ 2ನೇ ಎಲಿಜಬೆತ್‌ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. 130 ಕೋಟಿ ಭಾರತೀಯರ ಪರವಾಗಿ ತಾವು ಸಂತಾಪ ಸೂಚಿಸುತ್ತಿರುವುದಾಗಿ ಮೋದಿ ತಿಳಿಸಿದ್ದಾರೆ.

ಕರೆನ್ಸಿ ಕಥೆಯೇನು?: ಬ್ರಿಟಿಷ್‌ ಸಾಮ್ರಾಜ್ಯದ ನೋಟುಗಳು ಹಾಗೂ ನಾಣ್ಯಗಳ ಮೇಲೆ ರಾಣಿ 2ನೇ ಎಲಿಜಬೆತ್‌ ಫೋಟೋ ಮುದ್ರಣವಾಗಿದೆ. ಈಗ ಅವರು ಮೃತಪಟ್ಟಿರುವ ಹಿನ್ನೆಲೆ ಅದನ್ನು ಬದಲಾವಣೆ ಮಾಡಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ಮುದ್ರಿಸಲಾಗುವ ನೋಟು ಹಾಗೂ ನಾಣ್ಯಗಳ ಮೇಲೆ ರಾಜ ಚಾರ್ಲ್ಸ್‌ ಫೋಟೋ ಮುದ್ರಿಸಲಾಗುತ್ತದೆ. ಹಾಗೆಂದ ಮಾತ್ರಕ್ಕೆ ರಾಣಿಯ ಫೋಟೋ ಇರುವ ಹಣ ಅಮಾನ್ಯವಾಗುವುದಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next