Advertisement

ಆರ್ಥಿಕ ಸಂಕಷ್ಟ ನಿವಾರಿಸಲು ಆಸ್ತಿ ಘೋಷಿಸಿ: ಪಾಕ್‌ ಪ್ರಜೆಗಳಿಗೆ ಇಮ್ರಾನ್‌ ಖಾನ್‌ ಕರೆ

02:39 PM Jun 11, 2019 | Sathish malya |

ಇಸ್ಲಾಮಾಬಾದ್‌ : ಪಾಕಿಸ್ಥಾನ ಆರ್ಥಿಕವಾಗಿ ದೀವಾಳಿ ಅಂಚು ತಲುಪಿರುವ ಕಾರಣ ಪ್ರಧಾನಿ ಇಮ್ರಾನ್‌ ಖಾನ್‌ ಅವರು ದೇಶದ ಪ್ರಜೆಗಳಿಗೆ, ವಿಶೇಷವಾಗಿ ಸಿರಿವಂತರಿಗೆ, ಬೇನಾಮಿ ಆಸ್ತಿಪಾಸ್ತಿ ಹೊಂದಿದವರಿಗೆ, ತಮ್ಮ ಸಂಪತ್ತನ್ನು ಘೋಷಿಕೊಳ್ಳುವಂತೆ ಕರೆ ನೀಡಿದ್ದಾರೆ.

Advertisement

ತೆರಿಗೆ ಸಂಗ್ರಹ  ಹೆಚ್ಚಿಸುವ ಮೂಲಕ ದೇಶ ದೀವಾಳಿಯಾಗುವುದನ್ನು ತಪ್ಪಿಸುವುದಕ್ಕಾಗಿ ಪ್ರಧಾನಿ ಇಮ್ರಾನ್‌ ಖಾನ್‌ ದೇಶ ಬಾಂಧವರಿಗೆ ಈ ಕರೆ ನೀಡಿದ್ದಾರೆ.

“ದೇಶದ ಪ್ರಜೆಗಳೆಲ್ಲ ಸರಕಾರದ ಆಸ್ತಿ ಘೋಷಣೆ ಯೋಜನೆಯಡಿ ತಮ್ಮ ನೈಜ ಆಸ್ತಿಪಾಸ್ತಿಯನ್ನು ಘೋಷಿಸಬೇಕೆಂದು ನಾನು ವಿನಂತಿಸುತ್ತಿದ್ದೇನೆ; ಪ್ರಜೆಗಳು ತೆರಿಗೆ ಪಾವತಿಸದಿದ್ದರೆ ದೇಶ ನಡೆಸಲಾಗದು; ದೇಶವನ್ನು ಮೇಲೆತ್ತಲಾಗದು; ನಮ್ಮದು ಮಹೋನ್ನತ ದೇಶವಾಗಬೇಕಾದರೆ  ನಾವು ಮೊದಲು ನಮ್ಮನ್ನು ಬದಲಾಯಿಸಿಕೊಳ್ಳಬೇಕು; ಸ್ವಯಂ ಆಸ್ತಿಪಾಸ್ತಿ ಘೋಷಿಸಿಕೊಳ್ಳುವ ಜೂನ್‌ 30ರ ಅಂತಿಮ ಗಡುವಿನ ಬಳಿಕ ನಿಮಗೆ ಈ ಅವಕಾಶ ಸಿಗದು’ ಎಂದು ಇಮ್ರಾನ್‌ ಖಾನ್‌ ದೇಶ ಬಾಂಧವರಿಗೆ ಮಾಡಿಕೊಂಡಿರುವ ಮನವಿಯಲ್ಲಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next