Advertisement

ಗುರಿಯೊಂದಿಗೆ ಆಟವಾಡಿ: ತೃಪ್ತಿ ಮುರ್ಗುಂಡೆ

09:45 AM Dec 04, 2019 | sudhir |

ಉಡುಪಿ: ಕ್ರೀಡೆಯಲ್ಲಿ ಸೋಲು ಗೆಲುವು ಸಾಮಾನ್ಯ. ನಿರಂತರವಾದ ಪ್ರಯತ್ನದಿಂದ ಮಾತ್ರ ಗುರಿ ತಲುಪಲು ಸಾಧ್ಯ. ಕ್ರೀಡಾಪಟುವಿನ ಗುರಿಯಲ್ಲಿದೆ ಸಾಧನೆ ಗುಟ್ಟು ಎಂದು ಸೌತ್‌ ಏಶ್ಯನ್‌ ಗೇಮ್ಸ…ನ ಚಿನ್ನದ ಪದಕ ವಿಜೇತ ಕ್ರೀಡಾಪಟು ತೃಪ್ತಿ ಮುರ್ಗುಂಡೆ ಹೇಳಿದ್ದಾರೆ.

Advertisement

ಮಾಹೆ ವಿ.ವಿ. ಆಶ್ರಯದಲ್ಲಿ ಹೊಸ ದಿಲ್ಲಿಯ ಇಂಡಿಯನ್‌ ಯೂನಿವರ್ಸಿ ಟೀಸ್‌ ಸಹಭಾಗಿತ್ವದಲ್ಲಿ ಡಿ. 5ರ ವರೆಗೆ ಮಣಿಪಾಲದ ಮರೀನಾ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿರುವ ಮಹಿಳೆಯರ ದಕ್ಷಿಣ ವಲಯ ಅಂತರ್‌ ವಿ. ವಿ. ಬ್ಯಾಡ್ಮಿಂಟನ್‌ ಪಂದ್ಯಾಟವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು.

“ನಾನು ಪ್ರತಿಯೊಂದು ಪಂದ್ಯಾಟವನ್ನು ನಿರ್ದಿಷ್ಟ ಗುರಿಯಿಟ್ಟುಕೊಂಡು ಆಟವಾಡಿದ್ದೇನೆ. ಇದರಿಂದಾಗಿ ಸಾಕಷ್ಟು ಪ್ರಶಸ್ತಿಗಳು ಲಭಿಸಿವೆ. ಆದರೆ ರಾಷ್ಟ್ರೀಯ ಪ್ರಶಸ್ತಿ ಮಾತ್ರ ನನ್ನಿಂದ ತಪ್ಪಿ ಹೋಗುತ್ತಲೇ ಇತ್ತು. ಪ್ರಶಸ್ತಿ ಪಡೆಯಬೇಕು ಎಂಬ ಹಂಬಲದಿಂದ ಹಗಲಿರುಳು ಪರಿಶ್ರಮ ವಹಿಸಿದ ಪರಿಣಾಮವಾಗಿ ಸೌತ್‌ ಏಶ್ಯನ್‌ ಗೇಮ್ಸ…ನ ಚಿನ್ನದ ಪದಕ ಪಡೆಯುವಲ್ಲಿ ಯಶಸ್ವಿಯಾಗಿದ್ದೇನೆ’ ಎಂದವರು ಕ್ರೀಡಾ ಬದುಕಿನ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಮಾಹೆಯ ಸಹಕುಲಾಧಿಪತಿ ಡಾ| ಎಚ್‌.ಎಸ್‌. ಬಲ್ಲಾಳ್‌ ಮಾತನಾಡಿ, ಸಮಾಜದಲ್ಲಿ ಒಂದು ಹೆಣ್ಣು ಮಗು ಶಿಕ್ಷಣ ಪಡೆದು ಕೊಂಡರೆ ಸಮುದಾಯದ ಜತೆಗೆ ಸುಶಿಕ್ಷಿತ ದೇಶವನ್ನು ನಿರ್ಮಿಸುವ ಶಕ್ತಿ ಆಕೆಯಲ್ಲಿದೆ. ಮಾಹೆ ಒಟ್ಟು 25 ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದೆ. ಅದರಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಲ್ಲಿ ಶೇ.60 ಹೆಣ್ಣು ಮಕ್ಕಳು ಎಂದರು.

ಕುಲಸಚಿವ ಡಾ| ನಾರಾಯಣ ಸಭಾಹಿತ್‌ ಮಾತನಾಡಿ, ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಾಸ ನಕ್ಕೆ ಕ್ರೀಡೆ ಸಹಕಾರಿ. ಹೀಗಾಗಿ ಮಣಿಪಾಲ ಮಾಹೆ ತನ್ನ ಶಿಕ್ಷಣ ಸಂಸ್ಥೆಗಳಲ್ಲಿ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹವನ್ನು ನೀಡುತ್ತಿದ್ದು, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಕ್ರೀಡಾ ಕೂಟವನ್ನು ಆಯೋಜಿಸುತ್ತಿದೆ ಎಂದರು.
ಸಹಕುಲಪತಿಗಳಾದ ಡಾ| ಪೂರ್ಣಿಮಾ ಬಾಳಿಗಾ, ಡಾ| ಪಿ.ಎಲ್‌.ಎನ್‌.ಜಿ. ರಾವ್‌, ಮಾಹೆ ಕ್ರೀಡಾ ಕಾರ್ಯದರ್ಶಿ ಡಾ| ವಿನೋದ್‌ ನಾಯಕ್‌ ಉಪಸ್ಥಿತರಿದ್ದರು.

Advertisement

ಜತೆ ಕಾರ್ಯದರ್ಶಿ ಡಾ| ಶೋಭಾ ಸ್ವಾಗತಿಸಿದರು. ಸಚಿನ್‌ ವಂದಿಸಿದರು. ಕ್ರೀಡಾ ಕೂಟದಲ್ಲಿ ದಕ್ಷಿಣ ವಲಯದ 50 ವಿವಿಗಳ 300ಕ್ಕೂ ಹೆಚ್ಚಿನ ಕ್ರೀಡಾಪಟುಗಳು, 100 ತಂಡ ವ್ಯವಸ್ಥಾಪಕರು ಭಾಗವಹಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next