Advertisement

ಅರಣ್ಯ ಇಲಾಖೆಯಿಂದ ಸಸಿ ನೆಡುವ ಕಾರ್ಯ ಜೋರು

09:34 AM Jun 12, 2018 | |

ಕಕ್ಕೇರಾ: ಅರಣ್ಯ ಇಲಾಖೆ ವತಿಯಿಂದ ಸಮೀಪದ ತಿಂಥಣಿ ಕ್ರಾಸ್‌ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಸಸಿ ನೆಡಲಾಯಿತು.
ಎರಡು ಬದಿಯಿಂದ ಅರಳಳ್ಳಿ ಗ್ರಾಮದವರೆಗೂ ಹನ್ನೆರಡನೂರು ಸಸಿಗಳ ನೆಡುವ ಗುರಿ ಹೊಂದಲಾಗಿದೆ ಎಂದು ಸಾಮಾಜಿಕ ಅರಣ್ಯ ಇಲಾಖೆ ಉಪ-ಅಧಿಕಾರಿ ಪರಶುರಾಮ ತಿಳಿಸಿದರು.

Advertisement

ಸಸಿಗಳನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ಸಂರಕ್ಷಣೆ ಮಾಡಲಿದ್ದಾರೆ. ಅಲ್ಲದೆ ಸಾರ್ವಜನಿಕರು ಕೂಡ ಗಿಡಗಳನ್ನು ಉಳಿಸಿ-ಬೆಳೆಸಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಆರ್‌.ಎಫ್‌. ಪುಷ್ಪವತಿ, ಮಾನಪ್ಪ ಬೂದಗುಂಪಿ ತಿಂಥಣಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next