Advertisement

ಇದು ಸಾಮೂಹಿಕ ವೈಫಲ್ಯ: ಸರಣಿ ಸೋಲಿನ ಬಳಿಕ ರೋಹಿತ್ ಶರ್ಮಾ

09:51 AM Mar 23, 2023 | Team Udayavani |

ಚೆನ್ನೈ : 269 ರನ್ ದೊಡ್ಡ ಮೊತ್ತ ಎಂದು ನಾನು ಭಾವಿಸುವುದಿಲ್ಲ. ದ್ವಿತೀಯಾರ್ಧದಲ್ಲಿ ವಿಕೆಟ್ ಸ್ವಲ್ಪ ಸವಾಲಿನದಾಗಿತ್ತು. ನಾವು ಚೆನ್ನಾಗಿ ಬ್ಯಾಟ್ ಮಾಡಿದ್ದೇವೆ ಎಂದು ನಾನು ಭಾವಿಸುವುದಿಲ್ಲ. ಪಾಲುದಾರಿಕೆಗಳು ನಿರ್ಣಾಯಕವಾಗಿದ್ದು, ಇಂದು ನಾವು ಅದನ್ನು ಮಾಡಲು ವಿಫಲರಾಗಿದ್ದೇವೆ ಎಂದು ಭಾರತ ತಂಡದ ನಾಯಕ ರೋಹಿತ್ ಶರ್ಮಾ ಆಸ್ಟ್ರೇಲಿಯಾ ವಿರುದ್ಧ 2-1 ಅಂತರದಿಂದ ಏಕದಿನ ಸರಣಿ ಸೋಲಿನ ಬಳಿಕ ಪ್ರತಿಕ್ರಿಯೆ ನೀಡಿದ್ದಾರೆ.

Advertisement

ನಾಲ್ಕು ವರ್ಷಗಳ ನಂತರ ಭಾರತವು ತವರಿನಲ್ಲಿ ದ್ವಿಪಕ್ಷೀಯ ಏಕದಿನ ಸರಣಿಯನ್ನು ಬುಧವಾರ ಕಳೆದುಕೊಂಡಿತು.ಆರನ್ ಫಿಂಚ್ ನಾಯಕತ್ವದಲ್ಲಿ ಆಸ್ಟ್ರೇಲಿಯಾವು 2019 ರಲ್ಲಿ ವಿರಾಟ್ ಕೊಹ್ಲಿಯವರ ತಂಡವನ್ನು ಸೋಲಿಸಿತ್ತು.

“ಔಟಾದ ವಿಧಾನಗಳು… ಈ ವಿಕೆಟ್‌ಗಳ ಮೇಲೆ ಪರಿಣಾಮ ಬೀರಿದವು. ಒಬ್ಬ ಬ್ಯಾಟ್ಸ್ ಮ್ಯಾನ್ ಗೆ ಆಟವನ್ನು ಮುಂದುವರಿಸುವುದು ಮತ್ತು ಆಳವಾಗಿ ತೆಗೆದುಕೊಳ್ಳುವುದು ಮುಖ್ಯವಾಗಿತ್ತು. ಆದರೆ ನಾವೆಲ್ಲರೂ ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿದ್ದೆವು ಆದರೆ ಅದು ಆಗಲಿಲ್ಲ ಎಂದರು.

“ನಾವು ಎಲ್ಲಿ ಸುಧಾರಿಸಬೇಕು ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಇದು ಸಾಮೂಹಿಕ ವೈಫಲ್ಯ, ಈ ಸರಣಿಯಿಂದ ನಾವು ಸಾಕಷ್ಟು ಕಲಿಕೆಗಳನ್ನು ತೆಗೆದುಕೊಳ್ಳಬಹುದು. ಆಸ್ಟ್ರೇಲಿಯನ್ನರಿಗೆ ಕ್ರೆಡಿಟ್. ಇಬ್ಬರೂ ಸ್ಪಿನ್ನರ್‌ಗಳು ಒತ್ತಡವನ್ನು ಹೇರಿದರು ಮತ್ತು ಅವರ ಸೀಮರ್‌ಗಳು ಕೂಡ ಉತ್ತಮ ಬೌಲಿಂಗ್ ಮಾಡಿದರು” ಎಂದು ಶರ್ಮಾ ಹೇಳಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next