Advertisement

ಭಾರಿ ಮಳೆಗೆ ಧರೆಗುರುಳಿದ ಮನೆ : ಸೂರು ಕಳೆದುಕೊಂಡು ಅತಂತ್ರನಾದ ಕೂಲಿ ಕಾರ್ಮಿಕ

08:13 PM Jul 23, 2022 | Team Udayavani |

ಪಿರಿಯಾಪಟ್ಟಣ : ಕಳೆದ 20 ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ತಾಲೂಕಿನ ರಾವಂದೂರು ಹೋಬಳಿಯ ರಾಮನಾಥ ತುಂಗ ಹೊಸಕೊಪ್ಪಲು ಗ್ರಾಮದ ಲೇ.ಚೌಡನಾಯ್ಕ ರವರ ಮಗ ಸಿದ್ದನಾಯ್ಕ ಎಂಬುವವರ ಮನೆ ನೆಲಸಮಗೊಂಡಿದ್ದು ಮನೆ ಕಳೆದುಕೊಂಡ ಸಿದ್ದನಾಯ್ಕ ಅತಂತ್ರರಾಗಿದ್ದಾರೆ.

Advertisement

ಸಿದ್ದನಾಯ್ಕ ಕಡು ಬಡತನದಲ್ಲಿದ್ದು ಆಸ್ತಿಪಾಸ್ತಿ ಇಲ್ಲದೆ ಕೂಲಿಯನ್ನು ಅವಲಂಬಸಿ ಬದುಕು ಸಾಗಿಸುತ್ತಿದ್ದು, ಇದ್ದ ಮನೆಯನ್ನು ಕಳೆದುಕೊಂಡು ಬೀದಿಗೆ ಬಂದಿದ್ದಾನೆ.

ಕೂಡಲೇ ಇತನಿಗೆ ಅಧಿಕಾರಿಗಳು ನೆರವಿಗೆ ಧಾವಿಸಿ ಮನೆ ನಿರ್ಮಿಸಿಕೊಡಬೇಕೆಂದು ಗ್ರಾಪಂ ಸದಸ್ಯ ಆರ್.ಎಸ್.ಹರೀಶ್ ಮನವಿ ಮಾಡಿದ್ದು, ಮನೆ ನೆಲಸಮಗೊಂಡ ವಿಷಯ ತಿಳಿದು ಆರ್.ಐ.ಶ್ರೀಧರ್, ಗ್ರಾಮ ಲೆಕ್ಕಿಗ ಉಮೇಶ್ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದಿದ್ದು, ಗ್ರಾಮದ ಮುಖಂಡರಾದ ರಾಮಕೃಷ್ಣ, ಗುರುಮೂರ್ತಿ, ಚಂದ್ರನಾಯ್ಕ ಸೇರಿದಂತೆ ಮತ್ತಿತರರು ಸ್ಥಳದಲ್ಲಿದ್ದರು.

ಇದನ್ನೂ ಓದಿ : ವಿಟ್ಲ : ಕಾರಿನಲ್ಲಿ ಅಕ್ರಮ ಗೋ ಸಾಗಾಟ ಪ್ರಕರಣ : ಆರೋಪಿಗಳಿಬ್ಬರ ಬಂಧನ

Advertisement

Udayavani is now on Telegram. Click here to join our channel and stay updated with the latest news.

Next