Advertisement

ಜು. 4 ರಿಂದ 31 ವರೆಗೆ ಪಿಲಿಕುಳ ನಿಸರ್ಗಧಾಮ ಬಂದ್

05:02 PM Jul 02, 2020 | sudhir |

ಮಂಗಳೂರು: ಪಿಲಿಕುಳ ನಿಸರ್ಗಧಾಮವನ್ನು ತಾತ್ಕಾಲಿಕವಾಗಿ ಸಂದರ್ಶಕರಿಗೆ ಮುಚ್ಚಲು ನಿರ್ಧರಿಸಲಾಗಿದೆ. ಕೋವಿಡ್ ವೈರಾಣು ಕಾಯಿಲೆ ಸಮಸ್ಯೆ ಹಾಗೂ ಮಳೆಗಾಲದ ಕಾರಣದಿಂದ ಪಿಲಿಕುಳ ನಿಸರ್ಗಧಾಮಕ್ಕೆ ಸಂದರ್ಶಕರ ಭೇಟಿಯು ಅತ್ಯಲ್ಪವಾಗಿರುವುದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಪಿಲಿಕುಳದ ಎಲ್ಲಾ ಆಕರ್ಷಣೆಗಳನ್ನು 2020 ನೇ ಜುಲೈ ತಿಂಗಳ 4ನೇ ತಾರೀಖಿನಿಂದ 31ನೇ ತಾರೀಖಿನವರೆಗೆ ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಈ ಅವಧಿಯಲ್ಲಿ ಸಂದರ್ಶಕರ ಭೇಟಿಗೆ ಅವಕಾಶವಿರುವುದಿಲ್ಲ ಎಂದು ಪ್ರಕಟನೆ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next