Advertisement

PIL: ಅರ್ಜಿದಾರನಿಗೆ 5 ಲಕ್ಷ ರೂ. ಫೈನ್‌

10:25 PM Oct 14, 2023 | Team Udayavani |

ನವದೆಹಲಿ: ಬಾಂಬೆ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಪ್ರಮಾಣವಚನ ದೋಷದಿಂದ ಕೂಡಿತ್ತು ಎಂದು ಆರೋಪಿಸಿ ಪಿಐಎಲ್‌ ಸಲ್ಲಿಸಿದ್ದ ವ್ಯಕ್ತಿಗೆ ಸುಪ್ರೀಂ ಕೋರ್ಟ್‌ 5 ಲಕ್ಷ ರೂ. ದಂಡ ವಿಧಿಸಿದೆ. ಪ್ರಚಾರಕ್ಕಾಗಿ ಈ ರೀತಿ ಕ್ಷುಲ್ಲಕ ಯತ್ನ ನಡೆಸಲಾಗಿದೆ ಎಂದು ತರಾಟೆಗೆ ತೆಗೆದುಕೊಂಡಿದೆ.

Advertisement

ಪಿಐಎಲ್‌ ಅರ್ಜಿಯ ವಿಚಾರಣೆ ನಡೆಸಿದ ಸಿಜೆಐ ಡಿ.ವೈ.ಚಂದ್ರಚೂಡ್‌ ನೇತೃತ್ವದ ನ್ಯಾಯಪೀಠ, “ಮಹಾರಾಷ್ಟ್ರ ರಾಜ್ಯಪಾಲರು ಬಾಂಬೆ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಿಗೆ ಪ್ರಮಾಣವಚನ ಬೋಧಿಸಿದ್ದಾರೆ. ನಿಯಮಾನುಸಾರ ಪ್ರಮಾಣವಚನ ಪ್ರಕ್ರಿಯೆ ನಡೆದಿದೆ’ ಎಂದು ಹೇಳಿದೆ. “ಈ ರೀತಿಯ ತಕಾರರುಗಳನ್ನು ತೆಗೆಯುವಂತಿಲ್ಲ. ಸಾರ್ವಜನಿಕ ವಲಯದಲ್ಲಿ ಕೇವಲ ಪ್ರಚಾರ ಪಡೆಯಲು ಅರ್ಜಿದಾರರು ಈ ರೀತಿ ಕ್ಷುಲ್ಲಕ ಯತ್ನ ನಡೆಸಿದ್ದಾರೆ ಎಂದು ಟೀಕಿಸಿದೆ. ಮುಂದಿನ 4 ವಾರಗಳಲ್ಲಿ ಕೋರ್ಟ್‌ನ ರಿಜಿಸ್ಟ್ರಿ ಹಣ ಪಾವತಿ ಮಾಡುವಂತೆ ಆದೇಶಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next