Advertisement

ಚಿತ್ತಾರದಲ್ಲಿ ಚಿತ್ತ ಸೆಳೆದ ಚಿತ್ರಗಳು

05:50 PM Feb 28, 2020 | mahesh |

ಪ್ರತಿಯೊಂದು ಮಗುವಿನಲ್ಲಿಯೂ ವಿಶೇಷವಾದ ಪ್ರತಿಭೆ ಅಡಗಿರುತ್ತದೆ. ಇಂತಹ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ನಮ್ಮ ಕರ್ತವ್ಯ. ಈ ನಿಟ್ಟಿನಲ್ಲಿ ಸರಕಾರಿ ಪ. ಪೂ. ಕಾಲೇಜು ಬ್ರಹ್ಮಾವರದ ಪ್ರೌಢ ಶಾಲಾ ವಿಭಾಗದ ವಿದ್ಯಾರ್ಥಿಗಳು ಚಿತ್ತಾರ ಎನ್ನುವ ಚಿತ್ರಕಲೆ ಮತ್ತು ಕರಕುಶಲ ಕಲಾ ಪ್ರದರ್ಶನವನ್ನು ಏರ್ಪಡಿಸಿದ್ದರು. ಚಿತ್ರಕಲಾ ವಿಭಾಗದಲ್ಲಿ ಪೆನ್ಸಿಲ್‌ ಶೇಡ್‌, ಕ್ರೆಯಾನ್‌, ಆಯಿಲ್‌ ಪೇಸ್ಟಲ್‌, ಜಲವರ್ಣ ಮಾಧ್ಯಮದಿಂದ ರಚಿಸಿದ ಎಂಭತ್ತಕ್ಕೂ ಹೆಚ್ಚು ಕೃತಿಗಳಿದ್ದವು. ನದಿ ಮತ್ತು ಕಡಲ ತಡಿಯ ಸುಂದರ ದೃಶ್ಯಗಳು, ಯಕ್ಷಗಾನ, ಭೂತಕೋಲದ ಮುಖ ವರ್ಣಿಕೆ, ಐತಿಹಾಸಿಕ ಸ್ಮಾರಕಗಳು, ಪೌರಾಣಿಕ ಕಥಾಕೃತಿಗಳು, ಎಳೆಯರ ಕತೆಗಳ ಸಾಂದರ್ಭಿಕ ಚಿತ್ರಗಳು, ಹಬ್ಬಗಳು, ವರ್ಲಿ ಕಲೆ, ಸ್ಟಿಲ್‌ ಲೈಫ್, ನಕ್ಷಾ ಚಿತ್ರಗಳು, ಪ್ರಾಣಿ ಪಕ್ಷಿಗಳು, ಪರಿಸರ ಮತ್ತು ಗ್ರಾಹಕ ರಕ್ಷಣೆಗೆ ಸಂಬಂಧಿಸಿದ ಕೃತಿಗಳು ಹೀಗೆ ಹಲವಾರು ವಿಷಯಾಧಾರಿತ ಕೃತಿಗಳು ಎಳೆಯರಲ್ಲಡಗಿರುವ ಪ್ರತಿಭೆಗಳನ್ನು ಅನಾವರಣಗೊಳಿಸಿದ್ದವು. ಕರಕುಶಲ ವಿಭಾಗದಲ್ಲಿ ಕಸದಿಂದ ರಸವೆನ್ನುವಂತೆ ಪ್ಲಾಸ್ಟಿಕ್‌ ವಸ್ತುಗಳು, ಹಳೆ ಬಟ್ಟೆಬರೆಗಳು, ಪುಸ್ತಕಗಳು ಹೀಗೆ ಮುಂತಾದ ಅನೇಕ ವಸ್ತುಗಳು ವಿಶೇಷ ರೂಪತಳೆದು ಚಿತ್ತಾಕರ್ಷಕ ಕೃತಿಗಳಾಗಿ ಬದಲಾಗಿದ್ದವು. ಜೊತೆಗೆ ವಿವಿಧ ಕಸೂತಿ ವಿನ್ಯಾಸದ ವಸ್ತ್ರಗಳು, ಪೇಪರ್‌ ಫ್ಲವರ್, ಗ್ಲಾಸ್‌ ಪೇಂಟಿಂಗ್ಸ್‌, ಎಂಬೋಸಿಂಗ್ಸ್‌, ಫ್ಯಾಬ್ರಿಕ್‌ ಆರ್ಟ್‌, ಕ್ವಿಲ್ಲಿಂಗ್‌ ಆಭರಣಗಳು, ವಾಲ್‌ ಹ್ಯಾಂಗಿಂಗ್ಸ್‌, ಗೊಂಬೆಗಳು, ಮಣ್ಣಿನ ಕಲಾತ್ಮಕ ಹಣತೆಗಳು, ಗೂಡುದೀಪ ಹೀಗೆ ಬಹಳಷ್ಟು ಅಲಂಕಾರಿಕ ವಸ್ತುಗಳು ವೀಕ್ಷಕರ ಮನಸೂರೆಗೊಂಡಿದ್ದವು.

Advertisement

ಕೆ. ದಿನಮಣಿ ಶಾಸ್ತ್ರಿ

Advertisement

Udayavani is now on Telegram. Click here to join our channel and stay updated with the latest news.

Next