Advertisement

ಗೆಳೆಯರು ಹಳೆ ವಿದ್ಯಾರ್ಥಿ ಬಳಗ ಮುಂಬಯಿ ವತಿಯಿಂದ ವಿಹಾರಕೂಟ

04:45 PM Jul 08, 2018 | |

ಮುಂಬಯಿ: ನಗರದಲ್ಲಿ  ಕನ್ನಡ ಮಾದ್ಯಮದ್ಲಲ್ಲಿ ಒಟ್ಟಿಗೆ  ಕಲಿತು ಅನಂತರ  ಇತರ ಕಾಲೇಜುಗಳಿಗೆ ಹೋಗಿರುವ ಮಿತ್ರರೆಲ್ಲ ಒಂದಾಗಿ ಜು. 1 ರಂದು ಗೆಳೆಯರು ಹಳೆ ವಿದ್ಯಾರ್ಥಿ ಬಳಗ ಮುಂಬಯಿ  ವತಿಯಿಂದ  ವಿಹಾರಕೂಟವನ್ನು ವಿರಾರ್‌ ಕಲ್ಯಾಣಿ ರೆಸಾರ್ಟ್‌ನಲ್ಲಿ ಆಯೋಜಿಸಲಾಗಿತ್ತು.

Advertisement

ವಿಹಾರ ಕೂಟದ ಕಾರ್ಯಕ್ರಮದಲ್ಲಿ ಮುಂಬಯಿಯ ಕನ್ನಡ ಭವನ ಜೂನಿಯರ್‌ ಕಾಲೇಜು, ಸಿದ್ಧಾರ್ಥ್  ಕಾಲೇಜು,   ಸೋಮಯ್ನಾ ಕಾಲೇಜು,   ಬಿಎಸ್‌ ಕಾಲೇಜು,   ಅಂಜುಮನ್‌ ಇಸ್ಲಾಂ  ಕಾಲೇಜು, ಕಾಲ್ಸಾ ಕಾಲೇಜು ಇನ್ನಿತರ ಕಾಲೇಜುಗಳ  ಹಳೆ ವಿದ್ಯಾರ್ಥಿಗಳೆಲ್ಲ ವಿಹಾರಕೂಟದಲ್ಲಿ ಪಾಲ್ಗೊಂಡಿದ್ದರು.

ಸುಮಾರು 80  ಮಂದಿ ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ  ಆಟೋಟ ಸ್ಪರ್ಧೆ  ಹಾಗು ವಿವಿಧ ರೀತಿಯ ಮನೋರಂಜನಾ ಕಾರ್ಯಕ್ರಮ  ಜರಗಿತು.  

ಕಾರ್ಯಕ್ರಮದ ಯಶಸ್ಸಿಗೆ  ಪದ್ಮನಾಭ ಸಸಿಹಿತ್ಲು,  ಮೋಹನ್‌ ಮಾರ್ನಾಡ್‌,   ಶಿವಾನಂದ್‌  ಹರೀಶ್‌ ಪೂಜಾರಿ,  ಅರ್‌. ಕೆ. ಶೆಟ್ಟಿ,   ಚಂದ್ರಶೇಖರ್‌,  ಮುರಳಿ,  ಸರೋಜಿನಿ,  ವಸಂತಿ,  ರಘು ಮೊಲಿ ಸಹಕರಿಸಿದರು. ಪದ್ಮನಾಭ ಸಸಿಹಿತ್ಲು  ಅವರು ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next