Advertisement

ಗಡಿಪಿಲ: ವಿದ್ಯುತ್‌ ಕಂಬಕ್ಕೆ ಪಿಕಪ್‌ ಢಿಕ್ಕಿ 

02:15 PM Sep 07, 2018 | Team Udayavani |

ನರಿಮೊಗರು: ಕಾಣಿಯೂರು ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಗಡಿಪಿಲ ಸಮೀಪ ಪಿಕಪ್‌ ವಾಹನವೊಂದು ವಿದ್ಯುತ್‌ ಕಂಬಕ್ಕೆ ಢಿಕ್ಕಿ ಹೊಡೆದಿದ್ದು, ಕಂಬವೂ ತುಂಡಾಗಿ ಧರೆಗೆ ಬಿದ್ದ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ.

Advertisement

ಪುತ್ತೂರು ಕಡೆಯಿಂದ ಬರುತಿದ್ದ ಪಿಕಪ್‌, ಗಡಿಪಿಲ ತಿರುವಿನಲ್ಲಿ ನಿಯಂತ್ರಣ ತಪ್ಪಿ ಸವಣೂರು ಸಬ್‌ ಸ್ಟೇಷನ್‌ಗೆ ವಿದ್ಯುತ್‌ ಪ್ರವಹಿಸುವ ಎಚ್‌.ಟಿ. ಲೈನ್‌ ಕಂಬಕ್ಕೆ ಢಿಕ್ಕಿಯಾಗಿದೆ. ಢಿಕ್ಕಿಯ ರಭಸಕ್ಕೆ ವಿದ್ಯುತ್‌ ಕಂಬ ತುಂಡಾಗಿ ಬುಡದಿಂದಲೇಕಿತ್ತು ಬಂದಿದೆ. ಅಪಘಾತದಿಂದಾಗಿ ಸವಣೂರು ಸಬ್‌ ಸ್ಟೇಷನ್‌ ವ್ಯಾಪ್ತಿಯಲ್ಲಿ ವಿದ್ಯುತ್‌ ನಿಲುಗಡೆಯಾಗಿದೆ. ಹೀಗಾಗಿ, ಪಿಕಪ್‌ ಚಾಲಕ ಮತ್ತು ನಿರ್ವಾಹಕ ಅದೃಷ್ಟವಶಾತ್‌ ಪಾರಾಗಿದ್ದಾರೆ. ಗಡಿಪಿಲ – ಮಂಜೇಶ್ವರ – ಸುಬ್ರಹ್ಮಣ್ಯ ಹೆದ್ದಾರಿಯಲ್ಲಿ ಅತೀ ಹೆಚ್ಚು ಅಪಘಾತ ಸಂಭವಿಸುವ ಪ್ರದೇಶ ಇದಾಗಿದ್ದು, ಪರಿಹಾರ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ವಿದ್ಯುತ್‌ ನಿಲುಗಡೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next