Advertisement

ಮೆಡಿಕಲ್ಸ್‌ಗಳಿಗೆ ವೈದ್ಯಾಧಿಕಾರಿ ಭೇಟಿ

03:03 PM May 05, 2021 | Team Udayavani |

ಮಾಗಡಿ: ವೈದ್ಯರು ನೀಡಿದ ಸೂಕ್ತ ಚೀಟಿಯಿದ್ದರೆ ಮಾತ್ರ ಮಾತ್ರೆ ಹಾಗೂ ಔಷಧವನ್ನು ನೀಡಬೇಕು. ಇಲ್ಲದಿದ್ದರೆ ಕಾನೂನು ರಿತ್ಯ ಕ್ರಮ ಜರುಗಿಸಲಾಗುವುದು ಎಂದು ತಹಶೀಲ್ದಾರ್‌ ಬಿ.ಜಿ. ಶ್ರೀನಿವಾಸ್‌ ಪ್ರಸಾದ್‌ ಮೆಡಿಕಲ್‌ ಸ್ಟೋರ್‌ಗಳ ಮಾಲೀಕರಿಗೆ ಎಚ್ಚರಿಕೆ ನೀಡಿದರು.

Advertisement

ಪಟ್ಟಣದಲ್ಲಿ ಮೆಡಿಕಲ್ಸ್‌ ಸ್ಟೋರ್‌ಗಳಿಗೆ ಭೇಟಿ ನೀಡಿ ಮಾತನಾಡಿ, ಕೋವಿಡ್‌ ಮುಂಜಾಗ್ರತಾ ಕ್ರಮದ ಕುರಿತು ಜನಜಾಗೃತಿ ಮೂಡಿಸುತ್ತಿದ್ದರೂ ಜನರು ಕೋವಿಡ್‌ ನಿಯಮ ಪಾಲಿಸದೆ ಸಾವು ನೋವುಗಳನ್ನು ಅನುಭವಿಸುತ್ತಿದ್ದಾರೆ. ಜತೆಗೆ ವೈದ್ಯ, ಸೂಚನೆಗಳನ್ನುಪಡೆಯದೆ ಮೆಡಿಕಲ್‌ಗ‌ಳಿಂದ ಮಾತ್ರೆಗಳನ್ನು ಪಡೆದು ರೋಗಿಗಳಾಗುತ್ತಿದ್ದಾರೆ.

ವೈದ್ಯರ ಚೀಟಿ ಇಲ್ಲದೆ ಮೆಡಿ ಕಲ್ಸ್‌ ಸ್ಟೋರ್‌ಮಾಲೀಕರು ಔಷಧ ನೀಡಿ ದರೆ ಕಾನೂನುರಿತ್ಯ ಕ್ರಮ ಜರುಗಿಸ ಬೇಕಾಗುತ್ತದೆ ಎಚ್ಚರಿಕೆ ನೀಡಿದರು.ತಾಲೂಕು ವೈದ್ಯಾಧಿಕಾರಿ ಡಾ.ಸತೀಶ್‌ ಮಾತನಾಡಿ, ಕೊರೊನಾ ರೋಗಿಗಳ ಆರೋಗ್ಯದ ಮೇಲೆ ತೀವ್ರ ಪರಿಣಾಮಬೀರುತ್ರಿರುವ ಬಗ್ಗೆ ವೈದ್ಯರು ಸಹ ಆತಂಕಗೊಳಗಾಗಿದ್ದು, ಜೊತೆಗೆ ಕೋವಿಡ್‌ಸೋಂಕಿತರ ಸಂಖ್ಯೆಯೂ ಅಧಿಕಗೊಳ್ಳಲು ಕಾರಣವಾಗುತ್ತಿದೆ. ಯಾವುದೇ ಪರೀಕ್ಷೆಗೆ ಒಳಪಡದೆ ಏಕಾಏಕಿ ರೋಗಿಗಳೇ ಮೆಡಿಕಲ್ಸ್‌ ಸ್ಟೋರ್‌ಗಳಲ್ಲಿ ನೋವು ನಿವಾರಕ ಔಷಧ ಪಡೆದು ಸೇವಿಸಬೇಡಿ ಎಂದು ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next