ಚಿಕ್ಕಮಗಳೂರು: ತಲೆನೋವು ಎಂದು ಹೇಳಿದ್ದಕ್ಕೆ ಆರನೇ ತರಗತಿ ವಿದ್ಯಾರ್ಥಿಗೆ ದೈಹಿಕ ಶಿಕ್ಷಕರೊಬ್ಬರು ಮೈಮೇಲೆ ಬಾಸುಂಡೆ ಬರುವಂತೆ ಹಲ್ಲೆ ನಡೆಸಿದ ಘಟನೆ ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿ ನಡೆದಿದೆ.
ಕೊಪ್ಪ ತಾಲೂಕಿನ ಬಂಡೀಗಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದೆ. ಶ್ರೇಯಸ್ ಹಲ್ಲೆಗೊಳಗಾದ ಬಾಲಕ. ದೈಹಿಕ ಶಿಕ್ಷಕ ನಾಗರಾಜ್ ಎಂಬುವರು ಹಲ್ಲೆ ಮಾಡಿದ್ದಾಗಿ ಆರೋಪಿಸಲಾಗಿದೆ.
ಇದನ್ನೂ ಓದಿ:ಹುಣಸೆ ಹಣ್ಣಿನ ಬೆಲೆ ದಿಢೀರ್ ಕುಸಿತ: ಕೆ.ಜಿ.ಗೆ 40 ರೂ. ಇದ್ದ ಹಣ್ಣಿಗೆ ಈಗ 15 ರೂಪಾಯಿ
ತರಗತಿಯಲ್ಲಿ ಸರಿಯಾಗಿ ಬರೆಯಬೇಕು ಎಂದು ಶ್ರೇಯಸ್ ತಲೆಗೆ ನಾಗರಾಜ್ ಹೊಡೆದಿದ್ದಾರೆ. ಬಾಲಕ ತಲೆನೋವು ಎಂದು ಹೇಳಿದ್ದಕ್ಕೆ ಕಾಲಿಗೆ-ಬೆನ್ನಿಗೆ ಹೊಡೆದಿದ್ದಾರೆ. ಶಿಕ್ಷಕನ ಏಟಿನ ಪರಿಣಾಮ ಬಾಲಕನ ಬೆನ್ನಿನ ಮೇಲೆ ಬಾಸುಂಡೆಗಳು ಬಿದ್ದಿವೆ.
ಶಿಕ್ಷಕನ ವಿರುದ್ಧ ಸ್ಥಳೀಯರು, ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದು, ಅವರನ್ನು ಸೇವೆಯಿಂದ ವಜಾ ಮಾಡಬೇಕೆಂದು ಆಗ್ರಹಿಸಿದ್ದಾರೆ.