Advertisement

ಪುತ್ತೂರು: ಇವರು ವೃತ್ತಿಯಲ್ಲಿ ಫೋಟೋಗ್ರಾಫರ್: ಪ್ರವೃತ್ತಿಯಲ್ಲಿ ಮೂರ್ತಿ ತಯಾರಕ..!

03:33 PM Aug 30, 2022 | Team Udayavani |

ಪುತ್ತೂರು: ಕಳೆದ 33 ವರ್ಷಗಳಿಂದ 200 ಕ್ಕೂ ಅಧಿಕ ಮಣ್ಣಿನ ಗಣೇಶ ಮೂರ್ತಿ ತಯಾರಿಸಿರುವ ಪುತ್ತೂರಿನ ಫೋಟೋಗ್ರಾಫರ್ ಶ್ರೀನಿವಾಸ ಪ್ರಭು ಅವರದ್ದು ತೆರೆಮರೆಯ ಪ್ರತಿಭೆ. ಯಾವುದೇ ಪ್ರಚಾರ ಬಯಸದೆ ತನ್ನ ಪಾಡಿಗೆ ತಾನು ಮೂರ್ತಿ ರಚಿಸುವುದು ಪ್ರಭು ಅವರ ವಿಶೇಷತೆ.

Advertisement

ತಾನೇ ಕಲಿತರು..! :

ಮೂಲತಃ ಅಡ್ಯನಡ್ಕದವರಾಗಿರುವ ಪ್ರಭು ಗಣಪತಿ ಮೂರ್ತಿ ತಯಾರಿಕೆಯನ್ನು ಯಾರಿಂದಲೂ ಕಲಿತಿಲ್ಲ. ತಾನೇ ಸ್ವಂತ ಅಭ್ಯಸಿಸಿದರು. ಉಪ್ಪಿನಂಗಡಿಯಲ್ಲಿ ಮೂರ್ತಿ ತಯಾರಿಕೆ ಪ್ರಾರಂಭಿಸಿದರು. ಅದಾದ ಬಳಿಕ ಪುತ್ತೂರಿನಲ್ಲಿ ಈ ಕಾಯಕ ಮುಂದುವರಿಯಿತು. ತನ್ನ ವೃತ್ತಿಯೊಂದಿಗೆ ಗಣೇಶ ಚತುರ್ಥಿ ಸಂದರ್ಭದಲ್ಲಿ ಮೂರ್ತಿ ತಯಾರಿಸುತ್ತಾರೆ. ಬೇಡಿಕೆಗೆ ತಕ್ಕಂತೆ ಪ್ರತಿ ವರ್ಷ 7 ರಿಂದ 9 ಮೂರ್ತಿ ತಯಾರಿಸುತ್ತಾರೆ. ಕಳೆದ ಹಲವು ವರ್ಷಗಳಿಂದ ಬೊಳುವಾರಿನ ಬಾಬುರಾಯರ ಹೊಟೇಲ್‌ ಹಿಂಭಾಗದ ಕೊಠಡಿಯಲ್ಲಿ ಮೂರ್ತಿ ನಿರ್ಮಿಸಿ ನೀಡುತ್ತಿದ್ದು ಅದಕ್ಕೆ ಬೇಕಾದ ಮಣ್ಣನ್ನು ಬೇರೆ ಕಡೆಗಳಿಂದ ಸಂಗ್ರಹಿಸುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next