Advertisement

ಫಾರ್ಮಸಿಸ್ಟ್‌ಗಳು ಔಷಧಿ ಪರಿಣಿತರು

11:36 AM Sep 26, 2018 | Team Udayavani |

ಮೈಸೂರು: ಆಸ್ಪತ್ರೆಗೆ ದಾಖಲಾಗುವ ರೋಗಿಗಳ ಮೊದಲ ತಪಾಸಣೆ ನಡೆಸುವ ಫಾರ್ಮಸಿಸ್ಟ್‌ಗಳಿಗೂ ವೈದ್ಯರಷ್ಟೇ ಪ್ರಾಮುಖ್ಯತೆ ಇದೆ. ಹೀಗಾಗಿ ಫಾರ್ಮಸಿಸ್ಟ್‌ಗಳನ್ನು ಔಷಧಗಳ ಪರಿಣಿತರೆಂದರೆ ಅತಿಶಯೋಕ್ತಿಯಾಗದು ಎಂದು ಜೆಎಸ್‌ಎಸ್‌ ಆಸ್ಪತ್ರೆ ನಿರ್ದೇಶಕ ಡಾ.ಕರ್ನಲ್‌.ಎಂ.ದಯಾನಂದ ಹೇಳಿದರು. 

Advertisement

ನಗರ ಬನ್ನಿಮಂಟಪದಲ್ಲಿರುವ ಜೆಎಸ್‌ಎಸ್‌ ಫಾರ್ಮಸಿ ಕಾಲೇಜಿನಲ್ಲಿ ಇಂಡಿಯನ್‌ ಫಾರ್ಮೆಕುcéಯಲ್‌ ಅಸೋಸಿಯೇಷನ್‌(ಐಪಿಎ) ಮೈಸೂರು ವಿಭಾಗ ಮತ್ತು ಜೆಎಸ್‌ಎಸ್‌ ಅಕಾಡಮಿ ಆಫ್ ಹೈಯರ್‌ ಎಜುಕೇಷನ್‌ ಅಂಡ್‌ ರೀಸರ್ಚ್‌ ಸಂಸ್ಥೆ ಆಯೋಜಿಸಿದ್ದ ವಿಶ್ವ ಫಾರ್ಮೆಸಿಸ್ಟ್‌ಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

ಜೆಎಸ್‌ಎಸ್‌ ವಿವಿ ಕುಲಪತಿ ಡಾ.ಬಿ.ಸುರೇಶ್‌ ಮಾತನಾಡಿ, ಫಾರ್ಮಸಿಸ್ಟ್‌ಗಳು ತಮ್ಮಲ್ಲಿರುವ ಜ್ಞಾನದಿಂದ ರೋಗಿಗಳ ಕಾಯಿಲೆಯನ್ನು ಪತ್ತೆಹಚ್ಚುವ ಸಾಮರ್ಥ್ಯ ಹೊಂದಿರುತ್ತಾರೆ. ಇದೇ ಕಾರಣದಿಂದ ಬಹುತೇಕ ಸಂದರ್ಭದಲ್ಲಿ ಫಾರ್ಮಸಿಸ್ಟ್‌ಗಳು ವೈದ್ಯರುಗಳಿಗೆ ಒಂದು ರೀತಿಯಲ್ಲಿ ಸಲಹೆ ಮತ್ತು ಮಾಗರ್ದರ್ಶಕರಂತೆ ಕೆಲಸ ಮಾಡುತ್ತಾರೆ. ಈ ನಿಟ್ಟಿನಲ್ಲಿ ಫಾರ್ಮಸಿಸ್ಟ್‌ಗಳು ಮುಂದಿನ ದಿನಗಳಲ್ಲಿ ತಮ್ಮ ಜ್ಞಾನವನ್ನು ವೃದ್ದಿಸಿಕೊಂಡು ವೈದ್ಯಕೀಯ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಲು ಮುಂದಾಗಬೇಕೆಂದು ಕರೆ ನೀಡಿದರು. 

ಕಾರ್ಯಕ್ರಮದಲ್ಲಿ ಜೆಎಸ್‌ಎಸ್‌ ಫಾರ್ಮಸಿ ಕಾಲೇಜು ಪ್ರಾಂಶುಪಾಲ ಡಾ.ಟಿ.ಎಂ. ಪ್ರಮೋದ್‌ಕುಮಾರ್‌, ಮೈಸೂರು ಫಾರೂಕೀಯ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲ ಡಾ. ಮೊಹಮದ್‌ ಸಲಾವುದ್ದೀನ್‌, ಶಾರದ ವಿಲಾಸ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲ ಡಾ.ಹನುಮಂತಾಚಾರ್‌ ಜೋಶಿ, ಐಪಿಪಿ ಮೈಸೂರು ಶಾಖೆ ಗೌರವ ಕಾರ್ಯದರ್ಶಿ ಡಾ.ಚಂದನ್‌, ಖಜಾಂಚಿ ಡಾ.ಬಿ.ಎಂ. ಗುರುಪಾದಯ್ಯ ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next