ಅದರಂತೆ, 5ರಂದು ದೇಶಾದ್ಯಂತ ಪೆಟ್ರೋಲ್ ಬಂಕ್ಗಳು “ಖರೀದಿ ಮಾಡುವುದಿಲ್ಲ'(ನೋ ಪರ್ಚೇಸ್) ಎಂಬ ಪ್ರತಿಭಟನೆಯನ್ನು ನಡೆಸಲಿದ್ದು, 12ರಂದು ರಾಷ್ಟ್ರವ್ಯಾಪಿ ಮುಷ್ಕರ ನಡೆಸಲಿದ್ದೇವೆ ಎಂದು ಒಕ್ಕೂಟದ ವಕ್ತಾರ ಅಲಿ ದಾರುವಲ್ಲಾ ತಿಳಿಸಿದ್ದಾರೆ.
Advertisement
ನಾವು ಜೂ.29ರಂದು ಸತತ 3 ಗಂಟೆಗಳ ಕಾಲ ತೈಲ ಕಂಪನಿಗಳೊಂದಿಗೆ ಈ ಬಗ್ಗೆ ಚರ್ಚಿಸಿದ್ದೇವೆ. ಆಗ ದರ ಸುರಕ್ಷತೆ ಕುರಿತು ನಮಗೆ ಕಂಪನಿಗಳು ಭರವಸೆ ನೀಡಿದ್ದವು. ಆದರೆ, ಇನ್ನೂ ಅದನ್ನು ಅನುಷ್ಠಾನಗೊಳಿಸಿಲ್ಲ. ಅದಕ್ಕಾಗಿ 5ರಂದು ತೈಲವನ್ನು ಖರೀದಿಸದೇ ಇರಲು, 12ರಂದು ಖರೀದಿ ಮತ್ತು ಮಾರಾಟ ಎರಡನ್ನೂ ಮಾಡದಿರಲು ನಿರ್ಧರಿಸಿದ್ದೇವೆ ಎಂದೂ ಹೇಳಿದ್ದಾರೆ ದಾರುವಲ್ಲಾ.